LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗುಣಮಟ್ಟ ತಪಾಸಣೆ ಹೆಸರಲ್ಲಿ ಕರ್ನಾಟಕದ ಅಡಕೆ ತಡೆಯದಂತೆ ಮಹಾರಾಷ್ಟ್ರ ಸಿಎಂ ಸೂಚನೆ

ಗುಣಮಟ್ಟ ತಪಾಸಣೆ ಹೆಸರಲ್ಲಿ ಕರ್ನಾಟಕದ ಅಡಕೆ ಲಾರಿಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತಡೆಯದಂತೆ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಕೆಲವು ದಿನಗಳಿಂದ ಮಹಾರಾಷ್ಟ್ರದಲ್ಲಿ ಕರ್ನಾಟಕದ ಅಡಿಕೆ ಸಾಗಿಸುವ ಲಾರಿಗಳನ್ನು ತಡೆದು ನಿಲ್ಲಿಸಲಾಗಿದ್ದು, ಇದರಿಂದಾಗಿ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕ್ರಮಕೈಗೊಳ್ಳುವಂತೆ ರಾಜ್ಯದ ಅಡಿಕೆ ವ್ಯಾಪಾರಿಗಳು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳು, ರೈತ ಮುಖಂಡರು ಒತ್ತಾಯಿಸಿದ್ದರು.

ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಗುಣಮಟ್ಟ ತಪಾಸಣೆ ಕಾರಣವೊಡ್ಡಿ ಏಕಾಏಕಿ ಅಡಿಕೆ ಸಾಗಿಸುವ ಲಾರಿಗಳನ್ನು ತಡೆಯಲಾಗುತ್ತಿದ್ದು, ಇದರಿಂದ ಅಡಿಕೆ ಆವಕದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತಿದೆ. ನಿರ್ದಿಷ್ಟ ಸಮಸ್ಯೆ ಇದ್ದಲ್ಲಿ ಅದನ್ನು ಗಮನಕ್ಕೆ ತಂದು ಬಗೆಹರಿಸಿಕೊಳ್ಳಬೇಕು. ಬದಲಾಗಿ ಸಾರಾಸಗಟಾಗಿ ಅಡಕೆ ಸಾಗಿಸುವ ಲಾರಿಗಳನ್ನು ತಡೆಯುವುದು ಸರಿಯ ಎಂದು ಮನವರಿಕೆ ಮಾಡಿಕೊಟ್ಟಿದ್ದಾರೆ.

ನಂತರ ಮಹಾರಾಷ್ಟ್ರ ಅಧಿಕಾರಿಗಳಿಗೆ ಈ ಸಂಬಂಧ ಸಿಎಂ ಫಡ್ನವೀಸ್ ಸೂಚನೆ ನೀಡಿ ಗುಣಮಟ್ಟ ತಪಾಸಣೆ ಹೆಸರಲ್ಲಿ ಕರ್ನಾಟಕದ ಲಾರಿಗಳನ್ನು ಚೆಕ್ ಪೋಸ್ಟ್ ಗಳಲ್ಲಿ ತಡೆಯದಂತೆ ಹೇಳಿದ್ದಾರೆ. ಅಡಕೆ ಸಾಗಿಸುವ ಲಾರಿಗಳನ್ನು ಮುಂದೆ ಸಂಚರಿಸಲು ಅವಕಾಶ ಮಾಡಿಕೊಡಬೇಕೆಂದು ತಿಳಿಸಿದ್ದಾರೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ಅಫ್ಘಾನಿಸ್ತಾನದ ಮೇಲೆ ರಾತ್ರೋರಾತ್ರಿ ಪಾಕಿಸ್ತಾನದಿಂದ ಏರ್ ಸ್ಟ್ರೈಕ್: 35 ಜನ ಸಾವು, 100 ಮಂದಿಗೆ ಗಾಯರಾಮ ಮಂದಿರ ಅಕ್ರಮ ಹಿಂದೂ ಧರ್ಮದಲ್ಲಾದ ಅಕ್ರಮ: ಈ ಬಗ್ಗೆ RSS ನಿಲುವೇನು…?: ಮಹದೇವಪ್ಪ ಪ್ರಶ್ನೆಉದ್ಯೋಗಾಕಾಂಕ್ಷಿಗಳಿಗೆ ಸಿಹಿಸುದ್ದಿ KPSCಯಿಂದ 1,000ಕ್ಕೂ ಅಧಿಕ ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್BIG NEWS : ಕನ್ಯಾಪೊರೆ ಹರಿದಿದೆ ಎಂಬ ಕಾರಣಕ್ಕೆ ಸಂತ್ರಸ್ತೆಯನ್ನು ದೂಷಿಸಲು ಆಗುವುದಿಲ್ಲ ; ಹೈಕೋರ್ಟ್ ಮಹತ್ವದ ತೀರ್ಪುMoney Saving Tips : ಹಣ ನೀರಿನಂತೆ ಖರ್ಚಾಗುತ್ತಿದೆಯೇ ? ಹಾಗಿದ್ದರೆ ಈ ಸರಳ ವಿಧಾನ ಅನುಸರಿಸಿ..!ತಮಿಳುನಾಡಿನಲ್ಲಿ ವಿಜಯ್ ಟಿವಿಕೆ ಸರ್ಕಾರ ಪತನ ಬಗ್ಗೆ ಪ್ರಮುಖ ಸುಳಿವು ನೀಡಿದ ಡಿಎಂಕೆ ಮುಖ್ಯಸ್ಥ ಎಂ.ಕೆ. ಸ್ಟಾಲಿನ್ಬೆಳಿಗ್ಗೆ ಎದ್ದ ತಕ್ಷಣ ದೇಹ ನೋವು , ಸಂಧಿ ಬಿಗಿತ ಕಾಣಿಸಿಕೊಳ್ಳುತ್ತಿದೆಯೇ ? ಇಲ್ಲಿದೆ 5 ಮಹತ್ವದ ಆಯುರ್ವೇದ ಸಲಹೆಭಕ್ತರ ನಂಬಿಕೆಗೆ ದ್ರೋಹ: ರಾಮಮಂದಿರ ದೇಣಿಗೆ ದುರ್ಬಳಕೆ ಬಗ್ಗೆ ಸಿಎಂ ಡಿ.ಕೆ. ಶಿವಕುಮಾರ್ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸುದ್ದಿ: 7 ಸಾವಿರ ಪೊಲೀಸ್, ಕೃಷಿ ಇಲಾಖೆಯ 945 ಹುದ್ದೆ ಸೇರಿ 12 ಸಾವಿರ ಹುದ್ದೆಗಳಿಗೆ ನೇಮಕಾತಿSHOCKING : ಚಪ್ಪಟೆ ಮೂಗಿಗೆ ಪ್ಲಾಸ್ಟಿಕ್ ಸರ್ಜರಿ ; ಆಪರೇಷನ್‌’ಗೂ ಮುನ್ನವೇ ದಾವಣಗೆರೆಯಲ್ಲಿ ಯುವಕ ಸಾವು.!