LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಉದುರಿದ ಕೂದಲು ಮತ್ತೆ ಬೆಳೆಯಲು ಬೇವಿನ ಎಲೆ ಸಹಕಾರಿ ? ಇಲ್ಲಿದೆ ಮನೆಮದ್ದು!

ಕೂದಲು ಉದುರುವುದು, ತಲೆಹೊಟ್ಟು ಮತ್ತು ತಲೆಯ ಚರ್ಮದ (ಸ್ಕಾಲ್ಪ್) ಸಮಸ್ಯೆಯಿಂದ ಬಳಲುತ್ತಿದ್ದರೆ, ಬೇವಿನ ಎಲೆಗಳು (Neem Leaves) ಉತ್ತಮ ಮನೆಮದ್ದು ಆಗಬಹುದು. ಬೇವಿನ ಎಲೆಗಳಲ್ಲಿ ಇರುವ ಆಂಟಿ-ಫಂಗಲ್ ಹಾಗೂ ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ತಲೆಯ ಸೋಂಕುಗಳನ್ನು ತಡೆಯಲು ಸಹಕಾರಿ.

ತಲೆಹೊಟ್ಟಿಗೆ ಕಾರಣವಾಗುವ ‘ಮಲಾಸೀಜಿಯಾ’ (Malassezia) ಎಂಬ ಶಿಲೀಂಧ್ರದ ಬೆಳವಣಿಗೆಯನ್ನು ನಿಯಂತ್ರಿಸಲು ಬೇವಿನ ಎಲೆಗಳು ನೆರವಾಗುತ್ತವೆ. ಜೊತೆಗೆ, ಇದರಲ್ಲಿ ಇರುವ ಆಂಟಿಆಕ್ಸಿಡೆಂಟ್‌ಗಳು ತಲೆಯ ರಕ್ತಸಂಚಾರವನ್ನು ಸುಧಾರಿಸಿ, ಕೂದಲಿನ ಬೇರುಗಳನ್ನು ಬಲಪಡಿಸಲು ಸಹಾಯ ಮಾಡುತ್ತವೆ. ಬೇವಿನಲ್ಲಿರುವ ಅಜಾಡಿರಾಕ್ಟಿನ್ (Azadirachtin) ತಲೆ ಕೆರೆತ ಹಾಗೂ ಹೇನುಗಳ ಸಮಸ್ಯೆಯನ್ನೂ ಕಡಿಮೆ ಮಾಡಲು ಸಹಕಾರಿ.

1. ಬೇವಿನ ಎಲೆಗಳ ನೀರಿನಿಂದ ತಲೆ ತೊಳೆಯಿರಿ

ಒಂದು ಪಾತ್ರೆಯಲ್ಲಿ ನೀರು ತೆಗೆದು ಅದಕ್ಕೆ ಒಂದು ಮುಷ್ಟಿ ಬೇವಿನ ಎಲೆಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನೀರು ತಿಳಿ ಹಸಿರು ಬಣ್ಣಕ್ಕೆ ತಿರುಗಿದ ಬಳಿಕ ತಣ್ಣಗಾಗಲು ಬಿಡಿ. ನಂತರ ಶ್ಯಾಂಪೂ ಬಳಸಿ ತಲೆ ತೊಳೆದ ಬಳಿಕ ಕೊನೆಯಲ್ಲಿ ಈ ನೀರಿನಿಂದ ತಲೆ ತೊಳೆಯಿರಿ. ಇದರಿಂದ ತಲೆ ಕೆರೆತ ಕಡಿಮೆಯಾಗುವುದರ ಜೊತೆಗೆ ಕೂದಲಿಗೆ ನೈಸರ್ಗಿಕ ಹೊಳಪು ಬರುತ್ತದೆ.

2. ಬೇವಿನ ಎಲೆ – ಮೊಸರು ಹೇರ್ ಪ್ಯಾಕ್

ಒಂದು ಮುಷ್ಟಿ ತಾಜಾ ಬೇವಿನ ಎಲೆಗಳನ್ನು ಸ್ವಲ್ಪ ನೀರು ಹಾಕಿ ನುಣ್ಣಗೆ ರುಬ್ಬಿ ಪೇಸ್ಟ್ ಮಾಡಿ. ಅದಕ್ಕೆ 2 ಟೇಬಲ್ ಸ್ಪೂನ್ ಗಟ್ಟಿಯಾದ ಮೊಸರು ಸೇರಿಸಿ ಚೆನ್ನಾಗಿ ಕಲಸಿ. ಈ ಪ್ಯಾಕ್ ಅನ್ನು ತಲೆಚರ್ಮ ಹಾಗೂ ಕೂದಲಿಗೆ ಹಚ್ಚಿ 20–30 ನಿಮಿಷ ಬಿಡಿ. ಬಳಿಕ ಸಾಮಾನ್ಯ ನೀರು ಅಥವಾ ಮೃದುವಾದ ಶ್ಯಾಂಪೂ ಬಳಸಿ ತಲೆ ತೊಳೆಯಿರಿ. ವಾರಕ್ಕೊಮ್ಮೆ ಹೀಗೆ ಮಾಡಿದರೆ ತಲೆಹೊಟ್ಟು ಕಡಿಮೆಯಾಗಲು ಸಹಾಯವಾಗಬಹುದು.

3. ಬೇವಿನ ಎಲೆ – ಕಪ್ಪು ಜೀರಿಗೆ ಎಣ್ಣೆ

ಶುದ್ಧ ತೆಂಗಿನೆಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಒಂದು ಮುಷ್ಟಿ ಬೇವಿನ ಎಲೆಗಳು ಹಾಗೂ ಸ್ವಲ್ಪ ಕಪ್ಪು ಜೀರಿಗೆ ಹಾಕಿ ಚೆನ್ನಾಗಿ ಕುದಿಸಿ. ತಣ್ಣಗಾದ ಬಳಿಕ ಬಾಟಲಿಯಲ್ಲಿ ಸಂಗ್ರಹಿಸಿ. ತಲೆ ತೊಳೆಯುವ ಅರ್ಧ ಗಂಟೆ ಮೊದಲು ಈ ಎಣ್ಣೆಯನ್ನು ತಲೆಗೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ಇದರಿಂದ ಕೂದಲು ಉದುರುವಿಕೆ ಕಡಿಮೆಯಾಗಲು, ಹೊಸ ಕೂದಲು ಬೆಳೆಯಲು ಸಹಾಯವಾಗಬಹುದು. ಜೊತೆಗೆ ತಲೆಹೊಟ್ಟಿನ ಸಮಸ್ಯೆಯೂ ಕಡಿಮೆಯಾಗಬಹುದು.

ಕೂದಲು ಉದುರುವುದು, ತಲೆಹೊಟ್ಟು ಮತ್ತು ತಲೆಯ ಚರ್ಮದ (ಸ್ಕಾಲ್ಪ್) ಸಮಸ್ಯೆಯಿಂದ ಬಳಲುತ್ತಿದ್ದರೆ, ಬೇವಿನ ಎಲೆಗಳು (Neem Leaves) ಉತ್ತಮ ಮನೆಮದ್ದು ಆಗಬಹುದು. ಬೇವಿನ ಎಲೆಗಳಲ್ಲಿ ಇರುವ ಆಂಟಿ-ಫಂಗಲ್ ಹಾಗೂ ಆಂಟಿ-ಬ್ಯಾಕ್ಟೀರಿಯಲ್ ಗುಣಗಳು ತಲೆಯ ಸೋಂಕುಗಳನ್ನು ತಡೆಯಲು ಸಹಕಾರಿ.

ಸೂಚನೆ: ಮೇಲಿನ ಮಾಹಿತಿ ಇಂಟರ್ನೆಟ್ ಹಾಗೂ ವಿವಿಧ ವರದಿಗಳ ಆಧಾರದ ಮೇಲೆ ನೀಡಲಾಗಿದೆ. ಇದರ ವೈಜ್ಞಾನಿಕ ದೃಢೀಕರಣ ಸೀಮಿತವಾಗಿರಬಹುದು. ಯಾವುದೇ ಮನೆಮದ್ದನ್ನು ಬಳಸುವ ಮೊದಲು ತಜ್ಞ ವೈದ್ಯರ ಸಲಹೆ ಪಡೆಯುವುದು ಉತ್ತಮ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ವೀಕೆಂಡ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿದ ಅಕ್ಷಯ್ ಕುಮಾರ್ ಸಿನಿಮಾ: ಬಾಕ್ಸ್ ಆಫೀಸ್‌ನಲ್ಲಿ ‘ವೆಲ್ಕಮ್ ಟು ದಿ ಜಂಗಲ್’ ಹೊಸ ದಾಖಲೆ!ನಡುರಸ್ತೆಯಲ್ಲೇ ಮಿರ್ಜಾಪುರ ನಟನ ಮೇಲೆ ಹಲ್ಲೆ : ಸಾಮಾಜಿಕ ಜಾಲತಾಣದಲ್ಲಿ ಕಣ್ಣೀರು ಹಾಕಿದ ಸತೇಂದ್ರ ಸೋನಿ!ಆಲ್ಫಾ ಚಿತ್ರಕ್ಕಾಗಿ ಜಿಮ್‌ನಲ್ಲಿ ಬೆವರಿಳಿಸಿದ ಆಲಿಯಾ ಭಟ್ ಮತ್ತು ಶರ್ವರಿ: ವೈರಲ್ ಆಯ್ತು ಕಠಿಣ ವರ್ಕೌಟ್ ವಿಡಿಯೋಆಫ್ರಿಕಾದ ಕಾಡಿನಿಂದ ರಾಮಾಯಣದವರೆಗೆ: ಮಹೇಶ್ ಬಾಬು ನಟನೆಯ ‘ವಾರಣಾಸಿ’ ಚಿತ್ರದ ರೋಚಕ ಕಥಾಹಂದರ ರಿವೀಲ್BIG NEWS : ದೇಶದಲ್ಲೇ ಇದೇ ಮೊದಲು ; ಸಂಸ್ಕೃತ ವಿಶ್ವವಿದ್ಯಾಲಯದಲ್ಲಿ AI ಬಿ.ಟೆಕ್ ಕೋರ್ಸ್ ಗೆ ‘AICTE’ ಗ್ರೀನ್ ಸಿಗ್ನಲ್BREAKING : ರಾಮ ಮಂದಿರ ದೇಣಿಗೆ ಕಳ್ಳತನ ಪ್ರಕರಣ : ತುರ್ತು ಅರ್ಜಿ ವಿಚಾರಣೆಗೆ ಸುಪ್ರೀಂಕೋರ್ಟ್ ನಿರಾಕರಣೆBREAKING: ಮಂಗಳೂರಿನಲ್ಲಿ ಕೇರಳದ ಚಿನ್ನದ ವ್ಯಾಪಾರಿ ಕಾರು ಅಡ್ದಗಟ್ಟಿದ ದುಷ್ಕರ್ಮಿಗಳು: ಹೆದ್ದಾರಿಯಲ್ಲಿ ಸಿನಿಮಾ ಶೈಲಿಯಲ್ಲಿ ದರೋಡೆ ಮಾಡಿ ಪರಾರಿ300 ಕೋಟಿ ರೂ.ಗಳ ವೆಚ್ಚದಲ್ಲಿ 7 ರೈಲ್ವೇ ಮೇಲ್ಸೇತುವೆಗಳ ನಿರ್ಮಾಣಕ್ಕೆ ಕೇಂದ್ರ ಅಸ್ತು : ಬಿ.ವೈ.ರಾಘವೇಂದ್ರ4,500 ಎಲೆಕ್ಟ್ರಿಕ್ ಬಸ್‌ಗಳಿಗೆ ಸಿಗದ ಅನುಮೋದನೆ: ಟನಲ್ ರಸ್ತೆಗೆ ಹಣವಿದೆ, ಬಸ್‌ಗಳಿಗಿಲ್ಲವೇ? ರಾಜ್ಯ ಸರ್ಕಾರದ ವಿರುದ್ಧ ಸಂಸದ ತೇಜಸ್ವಿ ಸೂರ್ಯ ಆಕ್ರೋಶಲಿಮಾ ನಗರ ಹಾಗೂ ಬೆಂಗಳೂರು ನಗರದ ನಡುವೆ ಐತಿಹಾಸಿಕ ‘ಸಿಸ್ಟರ್-ಸಿಟಿ’ ಒಪ್ಪಂದ: 10 ಬಿಲಿಯನ್ ಡಾಲರ್ ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಮುನ್ನುಡಿ: ಡಿಸಿಎಂ ಡಾ.ಪರಮೇಶ್ವರ್