LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

Post office Scheme : ಅಂಚೆ ಕಚೇರಿಯ ಅದ್ಭುತ ಯೋಜನೆ ; ವರ್ಷಕ್ಕೆ ₹755 ಹೂಡಿಕೆ ಮಾಡಿ ₹15 ಲಕ್ಷ ಪಡೆಯುವ ಅವಕಾಶ.!

ನಮ್ಮ ದೇಶದಲ್ಲಿ ಅತ್ಯಂತ ನಂಬಿಕೆಯಾಗಿರುವ ಆರ್ಥಿಕ ಸಂಸ್ಥೆ ಯಾವುದಾದರೂ ಇದ್ದರೆ ಅದು ಪೋಸ್ಟ್ ಆಫೀಸ್ ಎಂದು ಹೇಳಬಹುದು. ಏಕೆಂದರೆ ಪೋಸ್ಟ್ ಆಫೀಸ್ ಭಾರತ ಸರ್ಕಾರದ ಅಧೀನದಲ್ಲಿರುವ ವಿಭಾಗವಾಗಿರುವುದರಿಂದ, ಗ್ರಾಮೀಣ ಪ್ರದೇಶಗಳಿಂದ ನಗರ ಪ್ರದೇಶಗಳವರೆಗೆ ಪ್ರತಿಯೊಬ್ಬರೂ ಕೂಡ ಪೋಸ್ಟ್ ಆಫೀಸ್ ಮೇಲೆ ನಂಬಿಕೆ ಇಟ್ಟುಕೊಂಡಿದ್ದಾರೆ.

ಎಷ್ಟು ಸರ್ಕಾರಿ ಬ್ಯಾಂಕುಗಳು ಇದ್ದರೂ ಹಾಗೂ ಇತರ ಆರ್ಥಿಕ ಸಂಸ್ಥೆಗಳು ಇದ್ದರೂ ಸಹ ಜನರು ಇನ್ನೂ ಕೂಡ ಪೋಸ್ಟ್ ಆಫೀಸ್‌ನಲ್ಲಿ ಖಾತೆ ತೆರೆಯಲು ಹಾಗೂ ವಿವಿಧ ಯೋಜನೆಗಳಲ್ಲಿ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಿದ್ದಾರೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಗುಂಪು ವೈಯಕ್ತಿಕ ಅಪಘಾತ ವಿಮೆ (Personal Accident Insurance) ಅಡಿಯಲ್ಲಿ ಅಪಘಾತ ವಿಮಾ ಯೋಜನೆಯನ್ನು ಕೂಡ ಒದಗಿಸಿದೆ. ಇದರ ಮೂಲಕ ವರ್ಷಕ್ಕೆ ಕೇವಲ ರೂ.755 ಪ್ರೀಮಿಯಂ ಪಾವತಿಸಿದರೆ, ಅಪಘಾತದಿಂದ ಪಾಲಿಸಿಧಾರರು ಮೃತಪಟ್ಟರೆ 15 ಲಕ್ಷ ರೂಪಾಯಿಗಳ ವಿಮಾ ಕವಚ ಲಭ್ಯವಾಗುತ್ತದೆ. 18 ವರ್ಷದಿಂದ 65 ವರ್ಷ ವಯಸ್ಸಿನವರೆಗೆ ಇರುವವರು ಈ ಯೋಜನೆಗೆ ಸೇರಬಹುದು. ಅಪಘಾತದಿಂದ ಪಾಲಿಸಿಧಾರರು ಮೃತಪಟ್ಟರೆ ನಾಮಿನಿಗೆ 15 ಲಕ್ಷ ರೂಪಾಯಿಗಳು ಸಂಪೂರ್ಣವಾಗಿ ನೀಡಲಾಗುತ್ತದೆ. ಅಪಘಾತದ ಕಾರಣದಿಂದ ಅಂಗವೈಕಲ್ಯ ಅಥವಾ ಪಾರ್ಶ್ವವಾಯು ಉಂಟಾದರೂ 15 ಲಕ್ಷ ರೂಪಾಯಿಗಳ ಪರಿಹಾರ ಲಭ್ಯವಾಗುತ್ತದೆ.

ಒಂದು ವೇಳೆ ಅಪಘಾತದಿಂದ ಭಾಗಶಃ ಅಂಗವೈಕಲ್ಯ ಉಂಟಾದರೆ ಉಂಟಾದ ನಷ್ಟದ ಪ್ರಮಾಣಕ್ಕೆ ಅನುಗುಣವಾಗಿ 15 ಲಕ್ಷ ರೂಪಾಯಿಗಳವರೆಗೆ ನೀಡಲಾಗುತ್ತದೆ. ಅಪಘಾತ ಸಂಭವಿಸಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ ಚಿಕಿತ್ಸೆ ಖರ್ಚಿಗಾಗಿ ಗರಿಷ್ಠ 1 ಲಕ್ಷ ರೂಪಾಯಿಗಳವರೆಗೆ ಸಹಾಯ ದೊರೆಯುತ್ತದೆ. ಆಸ್ಪತ್ರೆಯಲ್ಲಿ ದಾಖಲಾಗದೇ ಹೊರಗಡೆ ಚಿಕಿತ್ಸೆ ಪಡೆದರೆ 30 ಸಾವಿರ ರೂಪಾಯಿಗಳವರೆಗೆ ಕ್ಲೈಮ್ ಮಾಡಬಹುದು. ಒಂದು ವೇಳೆ ಅಪಘಾತದ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೆ ದಿನಕ್ಕೆ ರೂ.1000 ರಂತೆ ಪಾವತಿಸಲಾಗುತ್ತದೆ; ಗರಿಷ್ಠ 10 ದಿನಗಳವರೆಗೆ ಇದು ಲಭ್ಯ.

ಅಪಘಾತದಲ್ಲಿ ಪಾಲಿಸಿಧಾರರು ಮೃತಪಟ್ಟರೆ ಅವರ ಮಕ್ಕಳ ಶಿಕ್ಷಣಕ್ಕಾಗಿ ವಿಮಾ ಮೊತ್ತದ ಹೆಚ್ಚುವರಿ 10% ಅಥವಾ ಗರಿಷ್ಠ 1 ಲಕ್ಷ ರೂಪಾಯಿಗಳವರೆಗೆ ಹೆಚ್ಚುವರಿ ಹಣ ನೀಡಲಾಗುತ್ತದೆ. ಅಪಘಾತದಿಂದ ಸಾವು ಸಂಭವಿಸಿದರೆ ಅಂತ್ಯಕ್ರಿಯೆಗಾಗಿ 5 ಸಾವಿರ ರೂಪಾಯಿಗಳ ಆರ್ಥಿಕ ಸಹಾಯವೂ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ: ಇದು ಸಂಪೂರ್ಣವಾಗಿ ಪೇಪರ್‌ಲೆಸ್ ವಿಧಾನದಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಆರೋಗ್ಯ ಪರೀಕ್ಷೆಗಳು ಅಗತ್ಯವಿಲ್ಲ. ನಿಮ್ಮ ಹತ್ತಿರದ ಪೋಸ್ಟ್ ಆಫೀಸ್‌ಗೆ ಹೋಗಿ ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ ಸೇವಿಂಗ್ಸ್ ಖಾತೆ ತೆರೆಯಬೇಕು ಮತ್ತು ನಂತರ ಈ ವಿಮಾ ಯೋಜನೆಗೆ ಅರ್ಜಿ ಸಲ್ಲಿಸಬೇಕು. ಖಾತೆ ತೆರೆಯಲು ಆಧಾರ್ ಕಾರ್ಡ್ ಹಾಗೂ ಆಧಾರ್‌ಗೆ ಲಿಂಕ್ ಆಗಿರುವ ಮೊಬೈಲ್ ನಂಬರ್ ಅಗತ್ಯ.

ಪೋಸ್ಟ್ ಆಫೀಸ್ ಅಪಘಾತ ವಿಮೆಯ ಬಗ್ಗೆ ಸಾಮಾನ್ಯವಾಗಿ ಕೇಳುವ ಪ್ರಶ್ನೆಗಳು:

ಪ್ರಶ್ನೆ: ಅನಾರೋಗ್ಯದಿಂದ ಮೃತಪಟ್ಟರೆ ವಿಮೆ ಲಭ್ಯವಾಗುತ್ತದೆಯೇ?
ಉತ್ತರ: ಅನಾರೋಗ್ಯದಿಂದ ಮೃತಪಟ್ಟರೆ ವಿಮಾ ಮೊತ್ತ ಲಭ್ಯವಾಗುವುದಿಲ್ಲ. ಕೇವಲ ಅಪಘಾತದಿಂದ ಮೃತಪಟ್ಟರೆ ಮಾತ್ರ ರೂ.15 ಲಕ್ಷ ವಿಮೆ ಲಭ್ಯ.

ಪ್ರಶ್ನೆ: ಈ ವಿಮೆಯನ್ನು ಪ್ರತಿ ವರ್ಷ ನವೀಕರಿಸಬೇಕಾ?
ಉತ್ತರ: ಹೌದು, ಈ ವಿಮೆಗೆ ಪ್ರತಿ ವರ್ಷ ರೂ.755 ಪಾವತಿಸಿ ನವೀಕರಿಸಬೇಕು.

ಈ ಮಾಹಿತಿ ಕೇವಲ ನಿಮ್ಮ ಅರಿವಿಗಾಗಿ ಮಾತ್ರ ಪ್ರಕಟಿಸಲಾಗಿದೆ. ಯೋಜನೆಯ ನಿಯಮಗಳಲ್ಲಿ ಬದಲಾವಣೆಗಳಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಯೋಜನೆಯಲ್ಲಿ ಸೇರುವ ಮೊದಲು ದಯವಿಟ್ಟು ಪೋಸ್ಟ್ ಆಫೀಸ್‌ನ ಅಧಿಕೃತ ವೆಬ್‌ಸೈಟ್‌ನಲ್ಲಿ ಸಂಪೂರ್ಣ ವಿವರಗಳನ್ನು ಸ್ವತಃ ಪರಿಶೀಲಿಸಿ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಇಂದು ಬೆಂಗಳೂರು ಮೊಟ್ಟಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆBREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್ಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ ಅಷ್ಟೇ: ಪೃಥ್ವಿರಾಜ್ ಸುಕುಮಾರನ್ ಖಡಕ್ ಹೇಳಿಕೆ; ವಿಡಿಯೊBREAKING: ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ರೌಡಿಶೀಟರ್ ಸಾವುBREAKING NEWS: RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರಿಯಾಂಕ್ ಖರ್ಗೆ, ನಲಪಾಡ್ ಗೆ ಸಮನ್ಸ್ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ಹೇಡಿತನದ ಕೃತ್ಯ: ಬಿ.ಕೆ.ಹರಿಪ್ರಸಾದ್BIG NEWS: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಕೇಸ್: ಚಂಪತ್ ರಾಯ್ ರಾಜೀನಾಮೆ ದೃಢಪಡಿಸಿದ ಟ್ರಸ್ಟ್, ಜು. 11ರಂದು ಪ್ರಮುಖರ ಸಭೆBREAKING NEWS: ರಾಷ್ಟ್ರ ರಾಜಧಾನಿ ದೆಹಲಿ, ಕಣಿವೆ ರಾಜ್ಯ ಜಮ್ಮು –ಕಾಶ್ಮೀರದಲ್ಲಿ ಪ್ರಬಲ ಭೂಕಂಪ: ಆಫ್ಘಾನಿಸ್ತಾನದಲ್ಲೂ ನಡುಗಿದ ಭೂಮಿ