LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

OMG : ಶಾಲೆಯ ರಹಸ್ಯ ಕೊಠಡಿಯಲ್ಲಿ ₹1.77 ಕೋಟಿ ನಗದು ಪತ್ತೆ ; ರಾತ್ರಿ ಪೂರ್ತಿ ನೋಟು ಎಣಿಸಿದ ಪೊಲೀಸರು!

ಶಾಲೆ ಎಂದರೆ ಸರಸ್ವತಿಯ ಮಂದಿರ, ಜ್ಞಾನದ ದೇವಾಲಯ, ಮಕ್ಕಳ ಭವಿಷ್ಯ ರೂಪುಗೊಳ್ಳುವ ಸ್ಥಳ ಎಂಬ ಕಲ್ಪನೆ ನಮ್ಮಲ್ಲಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಕೇಂದ್ರಗಳಿಗಿಂತ ಹಣದ ವ್ಯವಹಾರಗಳ ಕೇಂದ್ರಗಳಾಗುತ್ತಿರುವ ಆರೋಪಗಳು ಕೇಳಿಬರುತ್ತಿವೆ. ಇದೀಗ ಪಶ್ಚಿಮ ಬಂಗಾಳದಲ್ಲಿ ನಡೆದ ಒಂದು ಘಟನೆ ದೇಶಾದ್ಯಂತ ಸಂಚಲನ ಮೂಡಿಸಿದೆ.

“ಇದು ಶಾಲೆಯಾ ಅಥವಾ ಬ್ಯಾಂಕಿನ ಸ್ಟ್ರಾಂಗ್ ರೂಮಾ?” ಎಂದು ಜನರು ಆಶ್ಚರ್ಯ ಪಡುತ್ತಿದ್ದಾರೆ. ಪಶ್ಚಿಮ ಬಂಗಾಳದ ಖಾಸಗಿ ಶಾಲೆಯೊಂದರ ರಹಸ್ಯ ಕೊಠಡಿಯಿಂದ ಬರೋಬ್ಬರಿ ₹1.77 ಕೋಟಿ ನಗದು ಪತ್ತೆಯಾಗಿದೆ!

ಆ ಕತ್ತಲೆ ಕೊಠಡಿಯ ರಹಸ್ಯ!

ಶಾಲೆಯಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕಿತ್ತು. ಅದರ ಆಧಾರದ ಮೇಲೆ ವಿಶೇಷ ಪೊಲೀಸ್ ತಂಡ ಶಾಲೆಯ ಮೇಲೆ ದಾಳಿ ನಡೆಸಿತು.ಶಾಲೆಯ ಎಲ್ಲಾ ಕೊಠಡಿಗಳನ್ನು ಪರಿಶೀಲಿಸುತ್ತಿದ್ದಾಗ, ಒಂದು ಕೊಠಡಿಗೆ ದೊಡ್ಡ ತಾಳೆ ಹಾಕಿರುವುದು ಪೊಲೀಸರ ಗಮನಕ್ಕೆ ಬಂತು. ತಾಳೆ ಕೀಲಿಯನ್ನು ಕೇಳಿದಾಗ, ಶಾಲೆಯ ಅಕೌಂಟೆಂಟ್ ಮತ್ತು ಸಿಬ್ಬಂದಿ ತಮ್ಮ ಬಳಿ ಕೀಲಿ ಇಲ್ಲ ಎಂದು ಹೇಳಿ ತಡಬಡಿಸಿದರು.ಅನುಮಾನಗೊಂಡ ಪೊಲೀಸರು ತಕ್ಷಣವೇ ತಾಳೆ ಒಡೆದು ಒಳ ಪ್ರವೇಶಿಸಿದರು. ಒಳಗೆ ಹೋದಾಗ ಅಲ್ಮಾರಿಗಳು ಹಾಗೂ ಚೀಲಗಳಲ್ಲಿ ₹500 ಮತ್ತು ₹200 ಮುಖಬೆಲೆಯ ನೋಟುಗಳ ರಾಶಿ ಕಂಡುಬಂದಿತು. ಈ ದೃಶ್ಯ ನೋಡಿ ಪೊಲೀಸರು ಕೂಡ ಬೆಚ್ಚಿಬಿದ್ದರು.

ರಾತ್ರಿ ಪೂರ್ತಿ ನೋಟು ಎಣಿಸಿದ ಅಧಿಕಾರಿಗಳು!

ಕೊಠಡಿಯಲ್ಲಿ ಸಿಕ್ಕಿದ ಹಣದ ಪ್ರಮಾಣ ಎಷ್ಟೋ ಹೆಚ್ಚಾಗಿದ್ದರಿಂದ, ಅದನ್ನು ಕೈಯಿಂದ ಎಣಿಸಲು ಸಾಧ್ಯವಾಗಲಿಲ್ಲ.ತಕ್ಷಣವೇ ಬ್ಯಾಂಕ್ ಅಧಿಕಾರಿಗಳನ್ನು ಕರೆಸಿ ಹಣ ಎಣಿಸುವ ಯಂತ್ರಗಳನ್ನು ಶಾಲೆಗೆ ತರಿಸಲಾಯಿತು. ಪೊಲೀಸರು ಮತ್ತು ಬ್ಯಾಂಕ್ ಸಿಬ್ಬಂದಿ ರಾತ್ರಿ ಪೂರ್ತಿ ನೋಟುಗಳನ್ನು ಎಣಿಸಿದರು.ಕೊನೆಗೆ ಬೆಳಗ್ಗೆ ಲೆಕ್ಕ ಪೂರ್ಣಗೊಂಡಾಗ, ಒಟ್ಟು ₹1,77,45,000 (ಸುಮಾರು ₹1.77 ಕೋಟಿ) ಹಣ ಪತ್ತೆಯಾಗಿದೆ ಎಂಬುದು ತಿಳಿದುಬಂತು.


ಘಟನೆ ನಡೆದ ಶಾಲೆಯ ವಿವರ

  • ಶಾಲೆಯ ಹೆಸರು: ಸೇಂಟ್ ಜೇವಿಯರ್ಸ್ ಇಂಟರ್‌ನ್ಯಾಷನಲ್ ಸ್ಕೂಲ್
  • ಸ್ಥಳ: ಅಸನ್ಸೋಲ್, ಪಶ್ಚಿಮ ಬಂಗಾಳ
  • ವಿಳಾಸ: ಜಿ.ಟಿ. ರಸ್ತೆ, ಮುರ್ಗಾಸೋಲ್ ಪ್ರದೇಶ, ಅಸನ್ಸೋಲ್
  • ಪತ್ತೆಯಾದ ನಗದು: ₹1.77 ಕೋಟಿ
  • ಅಕೌಂಟೆಂಟ್ ಹೆಸರು: ಸುಬ್ರತಾ ಚಟರ್ಜಿ

ಉತ್ತರ ನೀಡಲು ವಿಫಲವಾದ ಅಕೌಂಟೆಂಟ್

“ಇಷ್ಟು ದೊಡ್ಡ ಮೊತ್ತದ ಹಣ ಶಾಲೆಯ ಕೊಠಡಿಯಲ್ಲಿ ಏಕೆ ಇತ್ತು?” ಎಂಬ ಪ್ರಶ್ನೆಗೆ ಅಕೌಂಟೆಂಟ್ ಸುಬ್ರತಾ ಚಟರ್ಜಿ ಯಾವುದೇ ಸಮರ್ಪಕ ದಾಖಲೆಗಳನ್ನು ನೀಡಲು ವಿಫಲರಾದರು.ಈ ಹಣ ವಿದ್ಯಾರ್ಥಿಗಳ ಶುಲ್ಕದ ಹಣವೇ? ಅಥವಾ ಕಪ್ಪುಹಣವನ್ನು ಇಲ್ಲಿ ಅಡಗಿಸಿಟ್ಟಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಅವರು ಸ್ಪಷ್ಟ ಉತ್ತರ ನೀಡಲಿಲ್ಲ.

ಹಣಕ್ಕೆ ಸಂಬಂಧಿಸಿದ ಯಾವುದೇ ರಸೀದಿ ಅಥವಾ ಬ್ಯಾಂಕ್ ದಾಖಲೆಗಳು ಲಭ್ಯವಾಗದ ಕಾರಣ, ಪೊಲೀಸರು ಹಣವನ್ನು ವಶಪಡಿಸಿಕೊಂಡು ಅಕೌಂಟೆಂಟ್ ಹಾಗೂ ಶಾಲಾ ಆಡಳಿತದ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ

ಈ ಸುದ್ದಿ ವೈರಲ್ ಆದ ನಂತರ ಪೋಷಕರು ಮತ್ತು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮಕ್ಕಳ ಭವಿಷ್ಯಕ್ಕಾಗಿ ಪಾವತಿಸಿದ ಶುಲ್ಕದ ಹಣವನ್ನು ಬ್ಯಾಂಕ್‌ನಲ್ಲಿ ಇಡದೆ ರಹಸ್ಯ ಕೊಠಡಿಯಲ್ಲಿ ಏಕೆ ಅಡಗಿಸಿದ್ದಾರೆ?”ಇದು ಶಿಕ್ಷಣದ ದೇವಾಲಯವಲ್ಲ, ಕಪ್ಪುಹಣದ ಗೋದಾಮು!”ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಮತ್ತಷ್ಟು ತೀವ್ರಗೊಳಿಸಿದ್ದಾರೆ. ಶಾಲೆಯ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದ್ದು, ಈ ಪ್ರಕರಣದಲ್ಲಿ ಇತರ ಪ್ರಭಾವಿ ವ್ಯಕ್ತಿಗಳ ಪಾತ್ರವಿದೆಯೇ ಎಂಬುದನ್ನೂ ಪರಿಶೀಲಿಸಲಾಗುತ್ತಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸೀಶೆಲ್ಸ್ ಪ್ರವಾಸದಲ್ಲಿ ವಿಶ್ವದ ಅತ್ಯಂತ ಹಿರಿಯ ಜೀವಿ 194 ವರ್ಷದ ಜೋನಾಥನ್ ಆಮೆ ವೀಕ್ಷಿಸಿದ ಪ್ರಧಾನಿ ಮೋದಿರಾಜ್ಯದ ಬಸ್ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ: ಸಿದ್ಧರಾಮಯ್ಯ5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಇಂದಿನಿಂದ ಜು.1 ರವರೆಗೆ ಪಲ್ಸ್ ಪೋಲಿಯೋ: 65 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿBREAKING: ರಾಜ್ಯದಲ್ಲಿ 13,675 ಅಕ್ರಮ ವಲಸಿಗರು ಪತ್ತೆ: ಜಿಲ್ಲಾವಾರು ಪಟ್ಟಿ ಸಿದ್ಧಪಡಿಸಿದ ಗೃಹ ಇಲಾಖೆ2027ರ ವಿಶ್ವಕಪ್‌ಗೆ ರೋಹಿತ್ ಶರ್ಮಾ ಆಯ್ಕೆ ಬೇಡ: ವಿವಾದ ಸೃಷ್ಟಿಸಲಿದೆಯೇ ಮಾಜಿ ಕ್ರಿಕೆಟಿಗನ ಹೇಳಿಕೆ?ಇಂದು ಬೆಂಗಳೂರು ಮೊಟ್ಟಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆBREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್