LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಗೋವಾದಿಂದ ವಿಮಾನದಲ್ಲಿ ಎಷ್ಟು ಮದ್ಯ ತರಬಹುದು ? ಮಿತಿ ಮೀರಿದರೆ ಏನಾಗುತ್ತೆ? ಇಲ್ಲಿದೆ ಮಾಹಿತಿ

ಗೋವಾ ಪ್ರವಾಸದಿಂದ ವಿಮಾನದಲ್ಲಿ ಮದ್ಯದ ಬಾಟಲಿ ತರಲು ಯೋಚಿಸುತ್ತಿದ್ದೀರಾ? ಹಾಗಾದರೆ ನಿಯಮ ತಿಳಿದುಕೊಳ್ಳುವುದು ಮುಖ್ಯ. ದೇಶೀಯ ವಿಮಾನಗಳಲ್ಲಿ ಸಾಮಾನ್ಯವಾಗಿ 24%ರಿಂದ 70% ಆಲ್ಕೋಹಾಲ್‌ ಅಂಶವಿರುವ ಮದ್ಯವನ್ನು ಒಬ್ಬ ಪ್ರಯಾಣಿಕ ಗರಿಷ್ಠ 5 ಲೀಟರ್‌ವರೆಗೆ ಚೆಕ್‌ಇನ್‌ ಲಗೇಜ್‌ನಲ್ಲಿ ಸಾಗಿಸಬಹುದು.

ಗೋವಾ ಪ್ರವಾಸ ಮುಗಿಸಿಕೊಂಡು ವಾಪಸ್ ಬರುವಾಗ ಅಲ್ಲಿನ ಪ್ರಸಿದ್ಧ ವೈನ್‌ ಬಾಟಲಿ ಅಥವಾ ನಿಮಗೆ ಇಷ್ಟವಾದ ಮದ್ಯದ ಬ್ರ್ಯಾಂಡ್‌ ಅನ್ನು ವಿಮಾನದಲ್ಲಿ ತರಲು ಕೆಲವು ನಿಯಮಗಳನ್ನು ಪಾಲಿಸಬೇಕು. ದೇಶೀಯ ವಿಮಾನಗಳಲ್ಲಿ ಮದ್ಯ ಸಾಗಿಸಲು ಅನುಮತಿ ಇದ್ದರೂ, ಆಲ್ಕೋಹಾಲ್ ಪ್ರಮಾಣ, ಸಾಗಿಸುವ ಮಿತಿ ಮತ್ತು ಲಗೇಜ್ ನಿಯಮಗಳಿಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ನಿಯಮಗಳಿವೆ.

24ರಿಂದ 70% ಆಲ್ಕೋಹಾಲ್‌ ಇದ್ದರೆ 5 ಲೀಟರ್‌ವರೆಗೆ

ವಿಸ್ಕಿ, ರಮ್, ವೋಡ್ಕಾ, ಬ್ರಾಂಡಿ ಸೇರಿದಂತೆ 24ರಿಂದ 70% ವರೆಗೆ ಆಲ್ಕೋಹಾಲ್‌ ಅಂಶವಿರುವ ಮದ್ಯವನ್ನು ಒಬ್ಬ ಪ್ರಯಾಣಿಕ ಗರಿಷ್ಠ 5 ಲೀಟರ್‌ವರೆಗೆ ಸಾಗಿಸಬಹುದು.

24%ಕ್ಕಿಂತ ಕಡಿಮೆ ಆಲ್ಕೋಹಾಲ್‌ ಇದ್ದರೆ?

ಬಿಯರ್, ವೈನ್‌ನಂತಹ ಪಾನೀಯಗಳಲ್ಲಿ 24%ಕ್ಕಿಂತ ಕಡಿಮೆ ಆಲ್ಕೋಹಾಲ್‌ ಇದ್ದರೆ 5 ಲೀಟರ್‌ ಮಿತಿ ಅನ್ವಯಿಸುವುದಿಲ್ಲ. ಆದರೆ ಅವು ವಿಮಾನಯಾನ ಸಂಸ್ಥೆ ನಿಗದಿಪಡಿಸಿರುವ ಸಾಮಾನ್ಯ ಲಗೇಜ್ ತೂಕದ ಮಿತಿಯೊಳಗಿರಬೇಕು. ತೂಕದ ಮಿತಿ ಮೀರಿದರೆ ಹೆಚ್ಚುವರಿ ಲಗೇಜ್ ಶುಲ್ಕ ಪಾವತಿಸಬೇಕಾಗಬಹುದು.

70%ಕ್ಕಿಂತ ಹೆಚ್ಚು ಆಲ್ಕೋಹಾಲ್‌ ಇದ್ದರೆ ನಿಷೇಧ

70%ಕ್ಕಿಂತ ಹೆಚ್ಚಿನ ಆಲ್ಕೋಹಾಲ್‌ ಅಂಶ ಹೊಂದಿರುವ ದ್ರವಗಳನ್ನು ವಿಮಾನದಲ್ಲಿ ಸಾಗಿಸಲು ಸಂಪೂರ್ಣ ನಿಷೇಧವಿದೆ. ಇವುಗಳನ್ನು ಸುಲಭವಾಗಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳೆಂದು ಪರಿಗಣಿಸಲಾಗುತ್ತದೆ.

ಹ್ಯಾಂಡ್ ಲಗೇಜ್‌ನಲ್ಲಿ ಮದ್ಯಕ್ಕೆ ಅವಕಾಶ ಇದೆಯೇ?

ಸಾಮಾನ್ಯವಾಗಿ ಮದ್ಯದ ಬಾಟಲಿಗಳನ್ನು ಕ್ಯಾಬಿನ್ ಅಥವಾ ಹ್ಯಾಂಡ್ ಲಗೇಜ್‌ನಲ್ಲಿ ತೆಗೆದುಕೊಂಡು ಹೋಗಲು ಅನುಮತಿ ಇರುವುದಿಲ್ಲ. ಅವುಗಳನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ ಚೆಕ್-ಇನ್ ಲಗೇಜ್‌ನಲ್ಲೇ ಇಡಬೇಕು.

ಆದರೆ ಕೆಲವು ವಿಮಾನಯಾನ ಸಂಸ್ಥೆಗಳು ಭದ್ರತಾ ತಪಾಸಣೆ ಪೂರ್ಣಗೊಂಡ ಬಳಿಕ ಏರ್‌ಪೋರ್ಟ್‌ನ ಸೆಕ್ಯುರಿಟಿ ಹೋಲ್ಡ್ ಪ್ರದೇಶದಲ್ಲಿ ಖರೀದಿಸಿದ 1 ಲೀಟರ್‌ವರೆಗೆ ಮದ್ಯವನ್ನು, ನಿಯಮಗಳಿಗನುಗುಣವಾಗಿ ಹ್ಯಾಂಡ್ ಬ್ಯಾಗ್‌ನಲ್ಲಿ ಸಾಗಿಸಲು ಅವಕಾಶ ನೀಡುತ್ತವೆ.

ಬಾಟಲಿ ತೆರೆದಿದ್ದರೆ ಸಮಸ್ಯೆ!

ಮದ್ಯದ ಬಾಟಲಿ ಅದರ ಮೂಲ ಪ್ಯಾಕಿಂಗ್‌ನಲ್ಲೇ ಇರಬೇಕು ಮತ್ತು ತಯಾರಕರ ಅಧಿಕೃತ ಸೀಲ್ ಹಾಗೆಯೇ ಇರಬೇಕು.ಅರ್ಧದಷ್ಟು ಕುಡಿದಿರುವ ಬಾಟಲಿಗಳಿಗೆ ಅವಕಾಶವಿಲ್ಲ.ಮುಚ್ಚಳ ತೆರೆದಿರುವ ಬಾಟಲಿಗಳನ್ನು ಸಾಗಿಸಲು ಸಾಧ್ಯವಿಲ್ಲ.ಮದ್ಯವನ್ನು ಪ್ಲಾಸ್ಟಿಕ್ ಬಾಟಲಿಗೆ ವರ್ಗಾಯಿಸಿ ಸಾಗಿಸುವಂತಿಲ್ಲ.ನಿಯಮ ಉಲ್ಲಂಘನೆಯಾದರೆ ಭದ್ರತಾ ಸಿಬ್ಬಂದಿ ಬಾಟಲಿಯನ್ನು ವಶಪಡಿಸಿಕೊಳ್ಳಬಹುದು. ಒಂದೇ ಬಾಟಲಿಯ ಸಾಮರ್ಥ್ಯವೂ 5 ಲೀಟರ್‌ ಮೀರಬಾರದು.

ಕನೆಕ್ಟಿಂಗ್‌ ಫ್ಲೈಟ್‌ ಇದ್ದರೆ ಎಚ್ಚರ!

ವಿದೇಶದಿಂದ ಅಂತರರಾಷ್ಟ್ರೀಯ ವಿಮಾನದಲ್ಲಿ ಭಾರತಕ್ಕೆ ಬಂದು, ಅಲ್ಲಿಂದ ಮತ್ತೊಂದು ದೇಶೀಯ ವಿಮಾನಕ್ಕೆ ಪ್ರಯಾಣಿಸುವವರು ಹೆಚ್ಚಿನ ಎಚ್ಚರಿಕೆ ವಹಿಸಬೇಕು. ಅಂತರರಾಷ್ಟ್ರೀಯ ಟರ್ಮಿನಲ್‌ನಿಂದ ದೇಶೀಯ ಟರ್ಮಿನಲ್‌ಗೆ ತೆರಳುವಾಗ ಹ್ಯಾಂಡ್ ಬ್ಯಾಗ್‌ನಲ್ಲಿರುವ ಡ್ಯೂಟಿ ಫ್ರೀ ಮದ್ಯವನ್ನು ಮತ್ತೆ ಚೆಕ್-ಇನ್ ಲಗೇಜ್‌ಗೆ ವರ್ಗಾಯಿಸಬೇಕಾಗಬಹುದು.

ಸೂಚನೆ : ಏರ್‌ಪೋರ್ಟ್ ಮತ್ತು ವಿಮಾನಯಾನ ಸಂಸ್ಥೆಗಳ ನಿಯಮಗಳಲ್ಲಿ ವ್ಯತ್ಯಾಸವಿರುವ ಸಾಧ್ಯತೆ ಇರುವುದರಿಂದ, ಪ್ರಯಾಣಕ್ಕೂ ಮುನ್ನ ಸಂಬಂಧಿತ ಏರ್‌ಲೈನ್‌ನ ಮಾರ್ಗಸೂಚಿಗಳನ್ನು ಪರಿಶೀಲಿಸುವುದು ಉತ್ತಮ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: KKRTC ಗೆ 400 ಹೊಸ ಬಸ್ ಮಂಜೂರುಮನೆಗಳ್ಳತನ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ವಶಕ್ಕೆ: ಲಕ್ಷಾಂತರ ರೂ. ಮೌಲ್ಯದ ಆಭರಣ ವಶಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ BNP ಅಭ್ಯರ್ಥಿ ಮಿರ್ಜಾ ಫಖ್ರುಲ್ ಇಸ್ಲಾಂ ಅಲಂಗೀರ್ ಆಯ್ಕೆBREAKING: ಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ: ಅಮಿತ್ ಶಾ ಘೋಷಣೆಅನುಮತಿ ಇಲ್ಲದೆ ಸಚಿವ ಕೃಷ್ಣ ಬೈರೇಗೌಡರ ಪೋಸ್ಟರ್ ಅಂಟಿಸಿದ್ದ ವ್ಯಕ್ತಿ ವಿರುದ್ಧ ಕೇಸ್ ದಾಖಲುಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿKPME ಉಲ್ಲಂಘನೆ: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ದಂಡ, ಪರವಾನಗಿ ರದ್ದುಮೋದಿ ದೇವರಿಗೆ ಪೂಜೆ: ಭಕ್ತರಿಂದ ‘ಜೈ ಜೈ ಮೋದಿ, ಹರ್ ಹರ್ ಮೋದಿ’ ಘೋಷಣೆ; ದೆಹಲಿ ಪ್ರೆಸ್ ಕ್ಲಬ್‌ನಲ್ಲಿ ‘ಮೋದಿ ಚಾಲೀಸಾ’ ಕಾರ್ಯಕ್ರಮ!ತಪ್ಪಾಯ್ತು ಕ್ಷಮಿಸಿಬಿಡಿ: ರಸ್ತೆ ಮುಚ್ಚಿದ್ದಕ್ಕೆ ಭಾರತೀಯ ಸೇನೆಗೆ ‘ನಾನು GenZ’ ಎಚ್ಚರಿಕೆ ನೀಡಿದ್ದ ಯುವತಿಯಿಂದ ಕ್ಷಮೆಯಾಚನೆಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು; 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಸಿಎಂ ಡಿ.ಕೆ.ಶಿವಕುಮಾರ್ ಮನವಿ