LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬೆಂಗಳೂರಿನ ಐಷಾರಾಮಿ ಏರಿಯಾದಲ್ಲಿ ನಟಿ ಅಮೂಲ್ಯ ಒಡೆತನದ ಅದ್ಧೂರಿ ಪಬ್‌ ಓಪನ್‌ ಲಕ್ಸುರಿ ಲುಕ್‌ಗೆ ನೆಟ್ಟಿಗರು ಫಿದಾ

ಬೆಂಗಳೂರು: ಸ್ಯಾಂಡಲ್‌ವುಡ್‌ನ ಚೆಲುವಿನ ಚಿತ್ತಾರ ಸಿನಿಮಾ ಮೂಲಕ ಕನ್ನಡಿಗರ ಮನೆಮಗಳಾಗಿದ್ದ ನಟಿ ಅಮೂಲ್ಯ ಈಗ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ ಮದುವೆ ಹಾಗೂ ತಾಯಿಯಾದ ಬಳಿಕ ಬೆಳ್ಳಿತೆರೆಯಿಂದ ದೂರ ಉಳಿದಿದ್ದ ಅಮೂಲ್ಯ, ಮರಳಿ ಸಿನಿಮಾಗೆ ಬರ್ತಾರೆ ಅಂತ ಕಾಯ್ತಿದ್ದ ಅಭಿಮಾನಿಗಳಿಗೆ ಈಗ ಭರ್ಜರಿ ಸರ್ಪ್ರೈಸ್ ಕೊಟ್ಟಿದ್ದಾರೆ. ನಟಿ ಅಮೂಲ್ಯ ಹಾಗೂ ಅವರ ಪತಿ ಜಗದೀಶ್ ಆರ್. ಚಂದ್ರ ಜಂಟಿಯಾಗಿ ಬೆಂಗಳೂರಿನ ಐಷಾರಾಮಿ ಏರಿಯಾಗಳಲ್ಲೊಂದಾದ ರಾಜರಾಜೇಶ್ವರಿ ನಗರದಲ್ಲಿ (RR Nagar) ಕಣ್ಣು ಕೋರೈಸುವಂತಹ ಪ್ರೀಮಿಯಂ ಪಬ್‌ ಒಂದನ್ನು ಉದ್ಘಾಟನೆ ಮಾಡಿ ಬಿಸಿನೆಸ್ ವುಮನ್ ಆಗಿ ಅಖಾಡಕ್ಕಿಳಿದಿದ್ದಾರೆ

ಝೀರೋ ಡಿಗ್ರಿ ಆನ್ ದಿ ಹಿಲ್’: ಭೂಮಿ ಮೇಲಿನ ಸ್ವರ್ಗ

ಆರ್.ಆರ್. ನಗರದ 5 ನೇ ಹಂತದ ಎಸ್.ಎಸ್. ಹಿಲ್ಸ್‌ನ (ಶಕ್ತಿ ಹಿಲ್ ರೆಸಾರ್ಟ್ ಹತ್ತಿರ) ಎತ್ತರದ ಬೆಟ್ಟದ ಪ್ರದೇಶದಲ್ಲಿ ಈ ಐಷಾರಾಮಿ ಪಬ್ ತಲೆಎತ್ತಿದೆ. ಇದಕ್ಕೆ ಝೀರೋ ಡಿಗ್ರಿ ಆನ್ ದಿ ಹಿಲ್ ಬ್ರೂವರಿ ಅಂಡ್ ಕಿಚನ್(Zero Degree on the Hill) ಎಂದು ಹೆಸರಿಡಲಾಗಿದೆ. ಹೆಸರೇ ಸೂಚಿಸುವಂತೆ ಬೆಟ್ಟದ ಮೇಲಿರುವ ಈ ಪಬ್‌ನಿಂದ ಇಡೀ ಬೆಂಗಳೂರು ಸಿಟಿಯ ನೈಟ್‌ಲೈಫ್ ಸುಂದರವಾಗಿ ಕಣ್ಣಿಗೆ ಕಟ್ಟುತ್ತದೆ.

ಅದ್ಭುತ ಥೀಮ್: ಸ್ಥಳೀಯ ಮತ್ತು ಪಾಶ್ಚಿಮಾತ್ಯ ಸಂಪ್ರದಾಯದ ಥೀಮ್‌ಗಳನ್ನು ಇಲ್ಲಿ ಮಿಕ್ಸ್ ಮಾಡಲಾಗಿದೆ.

ಪ್ರಕೃತಿಯ ಸೌಂದರ್ಯ: ಕೃತಕ ಬಂಡೆಗಳು, ನೀರಿನ ಕೊಳಗಳು, ಮತ್ತು ಮನುಷ್ಯನ ಮುಖದಾಕೃತಿಯಲ್ಲಿ ಹರಿಯುವ ನೀರಿನ ಝರಿ (Waterfalls) ಇಲ್ಲಿದೆ.

ಯೂತ್ಸ್ ಫೇವರೆಟ್ ವಿನ್ಯಾಸ: ಗುಡಿಸಲು ಮತ್ತು ಅರಮನೆ ಮಾದರಿಯ ವಿನ್ಯಾಸ, ಸಿಂಹ ಮತ್ತು ಹುಲಿ ಬಾಯಿಯ ಕೌಂಟರ್‌ಗಳು, ಗುಹೆಯಾಕಾರದ ತಾಣ ಹಾಗೂ ಹಳ್ಳಿ ಸೊಗಡಿನ ನೆಲಹಾಸು ಗ್ರಾಹಕರನ್ನು ಮಂತ್ರಮುಗ್ಧರನ್ನಾಗಿಸುತ್ತದೆ.

ಇನ್‌ಸ್ಟಾಗ್ರಾಮ್ ಪ್ರಿಯರು ಮತ್ತು ರೀಲ್ಸ್ ಪ್ರೇಮಿಗಳಿಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಪ್ರತಿಯೊಂದು ಮೂಲೆಯೂ ಅದ್ಭುತ ಬ್ಯಾಕ್‌ಗ್ರೌಂಡ್ ನೀಡುತ್ತದೆ.

View this post on Instagram

A post shared by Amulya (@nimmaamulya)

ದೊಡ್ಮನೆ ಉದ್ಘಾಟನೆಗೆ ಹರಿದುಬಂದ ಸ್ಯಾಂಡಲ್‌ವುಡ್ ತಾರಾಗಣ

ಅಮೂಲ್ಯ-ಜಗದೀಶ್ ದಂಪತಿಯ ಈ ಹೊಸ ಉದ್ಯಮದ ಗ್ರ್ಯಾಂಡ್ ಓಪನಿಂಗ್ ಕಾರ್ಯಕ್ರಮಕ್ಕೆ ಇಡೀ ಸ್ಯಾಂಡಲ್‌ವುಡ್‌ ದಿಗ್ಗಜರೇ ಹರಿದುಬಂದಿದ್ದರು.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಪತ್ನಿ ಶಿಲ್ಪಾ, ನಟ ಶರಣ್, ಡಾಲಿ ಧನಂಜಯ್, ಲೂಸ್ ಮಾದ ಯೋಗಿ, ಸತೀಶ್ ನೀನಾಸಂ, ಆರಾಧನಾ ರಾಮ್, ದಿಶಾ ಮದನ್, ಪ್ರಗತಿ ಶೆಟ್ಟಿ (ರಿಷಬ್ ಶೆಟ್ಟಿ ಪತ್ನಿ) ಹಾಗೂ ಹಿರಿಯ ನಟಿಯರಾದ ಶ್ರುತಿ, ಮಾಳವಿಕಾ ಅವಿನಾಶ್ ಸೇರಿದಂತೆ ಘಟಾನುಘಟಿ ಸ್ಟಾರ್ ಸೆಲೆಬ್ರಿಟಿಗಳು ಭಾಗವಹಿಸಿ ಹೊಸ ಉದ್ಯಮಕ್ಕೆ ಭರ್ಜರಿ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಸ್ವತಃ ನಟಿ ಅಮೂಲ್ಯ ಅವರೇ ವಿಡಿಯೋ ಮೂಲಕ ಪಬ್‌ನ ಮೂಲೆ ಮೂಲೆಗಳನ್ನು ಎಕ್ಸ್‌ಪ್ಲೋರ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಸದ್ಯ ಭಾರಿ ವೈರಲ್ ಆಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಇಂದು ಬೆಂಗಳೂರು ಮೊಟ್ಟಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆBREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್ಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ ಅಷ್ಟೇ: ಪೃಥ್ವಿರಾಜ್ ಸುಕುಮಾರನ್ ಖಡಕ್ ಹೇಳಿಕೆ; ವಿಡಿಯೊBREAKING: ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ರೌಡಿಶೀಟರ್ ಸಾವುBREAKING NEWS: RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರಿಯಾಂಕ್ ಖರ್ಗೆ, ನಲಪಾಡ್ ಗೆ ಸಮನ್ಸ್ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ಹೇಡಿತನದ ಕೃತ್ಯ: ಬಿ.ಕೆ.ಹರಿಪ್ರಸಾದ್BIG NEWS: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಕೇಸ್: ಚಂಪತ್ ರಾಯ್ ರಾಜೀನಾಮೆ ದೃಢಪಡಿಸಿದ ಟ್ರಸ್ಟ್, ಜು. 11ರಂದು ಪ್ರಮುಖರ ಸಭೆBREAKING NEWS: ರಾಷ್ಟ್ರ ರಾಜಧಾನಿ ದೆಹಲಿ, ಕಣಿವೆ ರಾಜ್ಯ ಜಮ್ಮು –ಕಾಶ್ಮೀರದಲ್ಲಿ ಪ್ರಬಲ ಭೂಕಂಪ: ಆಫ್ಘಾನಿಸ್ತಾನದಲ್ಲೂ ನಡುಗಿದ ಭೂಮಿ