2026-27ನೇ ಸಾಲಿನಲ್ಲಿ ಅಲ್ಪಸಂಖ್ಯಾತರ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮದಿಂದ ಕ್ರಿಶ್ಚಿಯನ್ ವಿದ್ಯಾರ್ಥಿಗಳಿಗೆ ಅರಿವು ವಿದ್ಯಾಭ್ಯಾಸ ಸಾಲ ಯೋಜನೆಯಡಿ ಅರ್ಜಿ ಆಹ್ವಾನಿಸಲಾಗಿದೆ.
2026-27ನೇ ಸಾಲಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಕೆಇಎ ಸಿಇಟಿ, ನೀಟ್ ಅಥವಾ ಜೆಇಇ ಮೂಲಕ ಆಯ್ಕೆಗೊಂಡ ಎಮ್ಬಿಬಿಎಸ್, ಎಮ್ಡಿ, ಎಮ್ಎಸ್ ಕೋರ್ಸಗಳಿಗೆ ಸರ್ಕಾರಿ ಕಾಲೇಜು, ಖಾಸಗಿ, ಮ್ಯಾನೇಜಮೆಂಟ್ ಕೋಟಾದಡಿ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಗರಿಷ್ಠ ರೂ.5.00 ಲಕ್ಷದವರೆಗೆ ಸಾಲ ನೀಡುತ್ತಿದ್ದು, ವೃತ್ತಿಪರ ಕೋರ್ಸುಗಳಾದ ಎಮ್ಬಿಬಿಎಸ್, ಎಮ್ಡಿ, ಬಿಡಿಎಸ್, ಎಮ್ಡಿಎಸ್, ಬಿ.ಆಯುಷ್, ಎಮ್,ಆಯುಷ್, ಬಿಇ, ಬಿಟೆಕ್, ಬಿ.ಆರ್ಕ್, ಎಮ್.ಆರ್ಕ್, ಎಮ್ಬಿಎ, ಎಮ್ಸಿಎ, ಎಲ್ಎಲ್ಬಿ, ಬಿ.ಎಸ್ಸಿ ತೋಟಗಾರಿಕೆ, ಕೃಷಿ, ಕೃಷಿ ಎಂಜನೀಯರಿಂಗ್, ಡೈರಿ ತಂತ್ರಜ್ಞಾನ, ಅರಣ್ಯ, ಪಶುವೈದ್ಯಕೀಯ ಮತ್ತು ಪ್ರಾಣಿ ವಿಜ್ಞಾನ, ಆಹಾರ ತಂತ್ರಜ್ಞಾನ, ಮೀನುಗಾರಿಕೆ, ರೇಷ್ಮೆ, ಕೃಷಿ, ಗೃಹ, ಸಮುದಾಯ ವಿಜ್ಞಾನ, ಆಹಾರ ಪೋಷಣೆ ಮತ್ತ ಆಹಾರ ಪದ್ಧತಿ, ಬಿ.ಫಾರ್ಮಾ, ಎಮ್.ಫಾರ್ಮಾ, ಡಿ.ಫಾರ್ಮಾ ಈ ಕೋರ್ಸಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅರ್ಹ ಅಭ್ಯರ್ಥಿಗಳು www.kccdclonline.karnataka.gov.in ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ:0836-2748226 ಗೆ ಸಂಪರ್ಕಿಸಬಹುದು ಎಂದು ಕರ್ನಾಟಕ ಕ್ರಿಶ್ಚಿಯನ್ ಸಮುದಾಯ ಅಭಿವೃದ್ಧಿ ನಿಗಮ (ನಿ) ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪಿ.ಎಂ. ಶ್ರೀ ಸ್ಕೂಲ್ ಜವಾಹರ ನವೋದಯ ವಿದ್ಯಾಲಯದಲ್ಲಿ 11ನೇ ತರಗತಿ ಪ್ರವೇಶಕ್ಕೆ ಅರ್ಜಿ ಆಹ್ವಾನ.
2026-27 ನೇ ಶೈಕ್ಷಣಿಕ ಸಾಲಿನ 11ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. 2025-26ನೇ ಸಾಲಿನಲ್ಲಿ 10ನೇ ತರಗತಿ ಪರೀಕ್ಷೆಯಲ್ಲಿ ಕನಿಷ್ಠ ಶೇ. 60 ಅಂಕಗಳೊಂದಿಗೆ ಉತ್ತೀರ್ಣರಾದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಕಲಾ ವಿಭಾಗಕ್ಕೆ, ಕನಿಷ್ಠ ಶೇ. 60 ಅಂಕಗಳನ್ನು ಪಡೆದಿರಬೇಕು.ವಿದ್ಯಾರ್ಥಿಗಳ ಜನ್ಮ ದಿನಾಂಕವು ಜೂನ್ 01, 2009 ರಿಂದ ಜುಲೈ 31, 2011 ರ ನಡುವೆ ಇರಬೇಕು. ಕಲಾ ವಿಭಾಗಗಳಲ್ಲಿ ಪ್ರವೇಶ ಅವಕಾಶವಿದೆ. ಅರ್ಜಿ ನಮೂನೆಗಳನ್ನು ವಿದ್ಯಾಲಯದ ಕಚೇರಿಯಿಂದ ಅಥವಾ https://navodaya.gov.in ವೆಬ್ಸೈಟ್ನಿಂದ ಪಡೆಯಬಹುದು. ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲೆಗಳೊಂದಿಗೆ ಜೂನ್ 25, 2026 ರೊಳಗಾಗಿ ವಿದ್ಯಾಲಯಕ್ಕೆ ಸಲ್ಲಿಸಬೇಕು.ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 7411533747, 7337766555, 9353523752 ಗೆ ಸಂಪರ್ಕಿಸಬಹುದು ಎಂದು ಪಿ.ಎಂ. ಶ್ರೀ ಸ್ಕೂಲ್ ಜವಾಹರ ನವೋದಯ ವಿದ್ಯಾಲಯದ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.