LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ಜರಿ ನೇಮಕಾತಿ: ತೃತೀಯ ಲಿಂಗಿಗಳಿಗೆ 35 ಸೀಟು ಫಿಕ್ಸ್ ಅರ್ಹತೆಗಳೇನು?

ಮಂಗಳೂರು: ಖಾಕಿ ಧರಿಸಿ ದೇಶ ಸೇವೆ ಮಾಡಬೇಕು ಅಂದುಕೊಂಡಿರುವ ರಾಜ್ಯದ ಉದ್ಯೋಗಾಕಾಂಕ್ಷಿಗಳಿಗೆ ಕರ್ನಾಟಕ ಪೊಲೀಸ್ ಇಲಾಖೆಯು ಬಿಗ್ ಗಿಫ್ಟ್ ನೀಡಿದೆ. ರಾಜ್ಯಾದ್ಯಂತ ಖಾಲಿ ಇರುವ ಒಟ್ಟು 3,395 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳ ಭರ್ತಿಗೆ ಅಧಿಕೃತವಾಗಿ ಅರ್ಜಿ ಆಹ್ವಾನಿಸಲಾಗಿದೆ. ಈ ಬಾರಿಯ ನೇಮಕಾತಿಯಲ್ಲಿ ಮಹಿಳೆಯರಿಗೆ ಸಿಂಹಪಾಲು ನೀಡಲಾಗಿದ್ದು, ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ತೃತೀಯ ಲಿಂಗಿಗಳಿಗೂ (Transgenders) ವಿಶೇಷ ಮೀಸಲಾತಿ ಕಲ್ಪಿಸಿರುವುದು ಈ ನೋಟಿಫಿಕೇಶನ್‌ನ ಅತ್ಯಂತ ಬಿಗ್ ಹೈಲೈಟ್ ಆಗಿದೆ

ಮಹಿಳೆಯರಿಗೆ ಸಿಂಹಪಾಲು, ತೃತೀಯ ಲಿಂಗಿಗಳಿಗೆ 35 ಸೀಟು ಫಿಕ್ಸ್

ಈ ಬಾರಿಯ 3,395 ಹುದ್ದೆಗಳ ಭರ್ತಿಯಲ್ಲಿ ಇಲಾಖೆಯು ವರ್ಗಾವಾರು ಈ ಕೆಳಗಿನಂತೆ ಹಂಚಿಕೆ ಮಾಡಿದೆ:

ಮಹಿಳಾ ಅಭ್ಯರ್ಥಿಗಳು (ಸಿಂಹಪಾಲು): ಶೇ.66.75 ರಷ್ಟು ಅಂದರೆ ಬರೋಬ್ಬರಿ 2,266 ಹುದ್ದೆಗಳನ್ನು ಮಹಿಳೆಯರಿಗಾಗಿಯೇ ಮೀಸಲಿಡಲಾಗಿದೆ

ಪುರುಷ ಅಭ್ಯರ್ಥಿಗಳು: 755 ಹುದ್ದೆಗಳು.

ಮಾಜಿ ಸೈನಿಕರು (ಸೇನೆ): 257 ಹುದ್ದೆಗಳು.

ಮಹಿಳಾ ಸೇವಾ ಸಿಬ್ಬಂದಿ: 82 ಹುದ್ದೆಗಳು.

ತೃತೀಯ ಲಿಂಗಿಗಳು: 35 ಹುದ್ದೆಗಳು.

ಕಳೆದ 2025ರ ನೇಮಕಾತಿಯಲ್ಲೂ ತೃತೀಯ ಲಿಂಗಿಗಳಿಗೆ ಅವಕಾಶ ನೀಡಲಾಗಿತ್ತಾದರೂ, ಪರೀಕ್ಷಾ ವಿಧಾನ ಮತ್ತು ದೈಹಿಕ ಪರೀಕ್ಷೆಯ (Physical Test) ಬಗ್ಗೆ ಸಮರ್ಪಕ ಮಾಹಿತಿ ಇಲ್ಲದ ಕಾರಣ ಕೇವಲ ಇಬ್ಬರು ಮಾತ್ರ ಆಯ್ಕೆಯಾಗಿದ್ದರು. ಹೀಗಾಗಿ ಈ ಬಾರಿ 35 ಹುದ್ದೆಗಳನ್ನು ಮೀಸಲಿಟ್ಟು ಅರಿವು ಮೂಡಿಸಲಾಗುತ್ತಿದೆ.

ತೃತೀಯ ಲಿಂಗಿಗಳಿಗೆ ಜಿಲ್ಲಾವಾರು ಹುದ್ದೆಗಳ ಲೆಕ್ಕಾಚಾರ:

ಒಟ್ಟು 35 ಹುದ್ದೆಗಳ ಪೈಕಿ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೇ ಸಿಂಹಪಾಲು ನೀಡಲಾಗಿದೆ:

ಬೆಂಗಳೂರು ನಗರ: 25 ಹುದ್ದೆಗಳು.

ಮೈಸೂರು ನಗರ-1, ಹುಬ್ಬಳ್ಳಿ-ಧಾರವಾಡ-1, ಮಂಗಳೂರು ನಗರ-1, ಮೈಸೂರು ಜಿಲ್ಲೆ-1, ಕೊಡಗು-1, ಮಂಡ್ಯ-1, ಶಿವಮೊಗ್ಗ-1, ಚಿತ್ರದುರ್ಗ-1, ಹಾವೇರಿ-1, ಉಡುಪಿ ಜಿಲ್ಲೆಗೆ 1 ಹುದ್ದೆಯನ್ನು ಫಿಕ್ಸ್ ಮಾಡಲಾಗಿದೆ.

ಅರ್ಜಿ ಸಲ್ಲಿಸಲು ಯಾರೆಲ್ಲಾ ಅರ್ಹರು? (Eligibility & Qualification)

ವಿದ್ಯಾರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಡ್ಡಾಯವಾಗಿ ಮಾನ್ಯತೆ ಪಡೆದ ಮಂಡಳಿಯಿಂದ ಪಿಯುಸಿ (PUC / 12th Std) ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಿರಬೇಕು.

ವಯೋಮಿತಿ (Age Limit):

ಸಾಮಾನ್ಯ ವರ್ಗದ (General Category) ಅಭ್ಯರ್ಥಿಗಳಿಗೆ: 18 ರಿಂದ 33 ವರ್ಷ.

ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ (SC/ST) ಮತ್ತು ಒಬಿಸಿ (OBC) ಅಭ್ಯರ್ಥಿಗಳಿಗೆ: 18 ರಿಂದ 35 ವರ್ಷ.

ಆಯ್ಕೆ ವಿಧಾನ: ಲಿಖಿತ ಪರೀಕ್ಷೆ (Written Exam), ದೇಹದಾಢ್ರ್ಯತೆ (Physical Standard Test) ಮತ್ತು ಸಹಿಷ್ಣುತೆ ಪರೀಕ್ಷೆಯ ಮೂಲಕ ಅರ್ಹರನ್ನು ಶಾರ್ಟ್‌ಲಿಸ್ಟ್ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ಆರಂಭದ ದಿನಾಂಕ: ಜೂನ್ 8, 2026

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಜುಲೈ 3, 2026

ಅರ್ಜಿ ಶುಲ್ಕ ಪಾವತಿಸಲು ಲಾಸ್ಟ್ ಡೇಟ್: ಜುಲೈ 4, 2026

ಲಿಖಿತ ಪರೀಕ್ಷೆ ನಡೆಯುವ ದಿನಾಂಕ: ಆಗಸ್ಟ್ 2, 2026

ನಿಮ್ಮ ಜಿಲ್ಲೆಯಲ್ಲಿ ಎಷ್ಟು ಹುದ್ದೆಗಳು ಖಾಲಿ ಇವೆ ನೋಡಿ?

ರಾಜ್ಯದ ಒಟ್ಟು 25 ಕ್ಕೂ ಅಧಿಕ ವಿಭಾಗಗಳಲ್ಲಿ ಹುದ್ದೆಗಳ ಭರ್ತಿಗೆ ಆದೇಶ ಹೊರಡಿಸಲಾಗಿದೆ:

ಬೆಂಗಳೂರು ನಗರ: 2,015 (ಅತಿ ಹೆಚ್ಚು)

ಮಂಗಳೂರು ನಗರ: 125

ಮಂಡ್ಯ: 100

ಶಿವಮೊಗ್ಗ: 100

ಉಡುಪಿ: 100

ಮೈಸೂರು ಜಿಲ್ಲೆ: 58

ಕೊಡಗು: 75

ಚಿತ್ರದುರ್ಗ: 75

ಹುಬ್ಬಳ್ಳಿ-ಧಾರವಾಡ: 75

ಮೈಸೂರು ನಗರ: 70

ದಕ್ಷಿಣ ಕನ್ನಡ ಜಿಲ್ಲೆ: 70

ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾವೇರಿ, ಉತ್ತರ ಕನ್ನಡ, ಚಿಕ್ಕಮಗಳೂರು: ತಲಾ 50 ಹುದ್ದೆಗಳು.

ಹಾಸನ: 40

ಗದಗ: 35

ರೈಲ್ವೇಸ್‌ ಬೆಂಗಳೂರು: 25

ದಾವಣಗೆರೆ: 25

ರಾಯಚೂರು: 20

ಬಳ್ಳಾರಿ: 10 ಹುದ್ದೆಗಳು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಸೀಶೆಲ್ಸ್ ಪ್ರವಾಸದಲ್ಲಿ ವಿಶ್ವದ ಅತ್ಯಂತ ಹಿರಿಯ ಜೀವಿ 194 ವರ್ಷದ ಜೋನಾಥನ್ ಆಮೆ ವೀಕ್ಷಿಸಿದ ಪ್ರಧಾನಿ ಮೋದಿರಾಜ್ಯದ ಬಸ್ ಪ್ರಯಾಣಿಕರಿಗೆ ಬೆಲೆ ಏರಿಕೆ ಶಾಕ್ಮುಖ್ಯಮಂತ್ರಿಯ ಸಿಂಹಾಸನ ನಶ್ವರ, ಜನತೆಯ ಹೃದಯ‌ಸಿಂಹಾಸನ ಶಾಶ್ವತ: ಸಿದ್ಧರಾಮಯ್ಯ5 ವರ್ಷದೊಳಗಿನ ಮಕ್ಕಳ ಪೋಷಕರಿಗೆ ಮುಖ್ಯ ಮಾಹಿತಿ: ಇಂದಿನಿಂದ ಜು.1 ರವರೆಗೆ ಪಲ್ಸ್ ಪೋಲಿಯೋ: 65 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿBREAKING: ರಾಜ್ಯದಲ್ಲಿ 13,675 ಅಕ್ರಮ ವಲಸಿಗರು ಪತ್ತೆ: ಜಿಲ್ಲಾವಾರು ಪಟ್ಟಿ ಸಿದ್ಧಪಡಿಸಿದ ಗೃಹ ಇಲಾಖೆ2027ರ ವಿಶ್ವಕಪ್‌ಗೆ ರೋಹಿತ್ ಶರ್ಮಾ ಆಯ್ಕೆ ಬೇಡ: ವಿವಾದ ಸೃಷ್ಟಿಸಲಿದೆಯೇ ಮಾಜಿ ಕ್ರಿಕೆಟಿಗನ ಹೇಳಿಕೆ?ಇಂದು ಬೆಂಗಳೂರು ಮೊಟ್ಟಮೊದಲ ಸುರಂಗ ರಸ್ತೆ ನಿರ್ಮಾಣಕ್ಕೆ ಸಿಎಂ ಶಂಕುಸ್ಥಾಪನೆBREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್