LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮುಂಬೈನಲ್ಲಿ ಕನ್ನಡಿಗರ ದೋಸೆ ದರ್ಬಾರ್: ಕೇವಲ 2 ವರ್ಷದಲ್ಲಿ ₹350 ಕೋಟಿ ವಹಿವಾಟು

ಮುಂಬೈ: ನಮ್ಮ ಕರ್ನಾಟಕದ ಹೆಮ್ಮೆಯ ತಿನಿಸು, ವರ್ಲ್ಡ್ ಫೇಮಸ್ ದಾವಣಗೆರೆ ಬೆಣ್ಣೆ ದೋಸೆ ಇಂದು ವಾಣಿಜ್ಯ ನಗರಿ ಮುಂಬೈನಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ. ಕನ್ನಡಿಗರ ಈ ಸಾಂಪ್ರದಾಯಿಕ ರುಚಿಯನ್ನೇ ಪ್ರೇರಣೆಯಾಗಿಟ್ಟುಕೊಂಡು ಹೋಟೆಲ್ ಆರಂಭಿಸಿದ ದಂಪತಿ, ಕೇವಲ ಎರಡೇ ವರ್ಷಗಳಲ್ಲಿ ಭಾರಿ ಯಶಸ್ಸು ಗಳಿಸಿ ಭೇಷ್ ಎನಿಸಿಕೊಂಡಿದ್ದಾರೆ.

ಪ್ರಸಿದ್ಧ RPG ಗ್ರೂಪ್ ಅಧ್ಯಕ್ಷ ಹರ್ಷ ಗೋಯೆಂಕಾ ಅವರು ತಮ್ಮ ಸಾಮಾಜಿಕ ಜಾಲತಾಣ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಈ ಹೋಟೆಲ್‌ನ ರೋಚಕ ಯಶೋಗಾಥೆಯನ್ನು ಹಂಚಿಕೊಳ್ಳುವ ಮೂಲಕ ದಂಪತಿಯ ಸಾಹಸವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

12 ಆಸನಗಳಿಂದ ₹350 ಕೋಟಿಯ ಉದ್ಯಮ

ಮುಂಬೈನ ಜನನಿಬಿಡ ಪಶ್ಚಿಮ ಬಾಂದ್ರಾದಲ್ಲಿ 2024ರಲ್ಲಿ ಅಖಿಲ್ ಅಯ್ಯರ್ ಮತ್ತು ಶ್ರಿಯಾ ನಾರಾಯಣ್ ದಂಪತಿ ಕೇವಲ 12 ಆಸನಗಳ ಅತ್ಯಂತ ಸಣ್ಣ ಕೆಫೆಯೊಂದನ್ನು ಆರಂಭಿಸಿದ್ದರು. ದಕ್ಷಿಣ ಭಾರತೀಯ ಸಾಂಪ್ರದಾಯಿಕ ಶೈಲಿಗೆ ನಿದರ್ಶನವಾಗಿ ಇದಕ್ಕೆ ‘ಬೆಣ್ಣೆ’ (Benne) ಎಂದೇ ಹೆಸರಿಡಲಾಗಿತ್ತು.

ಆರಂಭವಾದ ಕೇವಲ ಎರಡೇ ವರ್ಷಗಳಲ್ಲಿ ಈ ಸಣ್ಣ ಕೆಫೆ ಇಂದು ಬರೋಬ್ಬರಿ ₹350 ಕೋಟಿ ಮೌಲ್ಯದ ಬೃಹತ್ ಉದ್ಯಮವಾಗಿ ಬೆಳೆದು ನಿಂತಿದೆ. ಮುಂಬೈನಲ್ಲಿ ಹಲವು ಶಾಖೆಗಳನ್ನು ತೆರೆದಿರುವ ‘ಬೆಣ್ಣೆ’, ಇದೀಗ ದೇಶದ ರಾಜಧಾನಿ ದೆಹಲಿಗೂ ತನ್ನ ಜಾಲವನ್ನು ವಿಸ್ತರಿಸಿದೆ.

https://x.com/hvgoenka/status/2086395330174824764

ಯಶಸ್ಸಿನ ಹಿಂದಿರುವ ರಹಸ್ಯವೇನು?

ಖ್ಯಾತ ಉದ್ಯಮಿ ಹರ್ಷ ಗೋಯೆಂಕಾ ಅವರ ವಿಶ್ಲೇಷಣೆಯಂತೆ, ‘ಬೆಣ್ಣೆ’ ಹೋಟೆಲ್‌ನ ಈ ಅಭೂತಪೂರ್ವ ಯಶಸ್ಸಿಗೆ ಪ್ರಮುಖ ಕಾರಣಗಳು:

ಸರಳ ಹಾಗೂ ಸೀಮಿತ ಮೆನು (Tight Menu): ಸಿಕ್ಕಸಿಕ್ಕ ತಿಂಡಿಗಳ ಭರಾಟೆ ಇಲ್ಲದೆ, ಬೆರಳೆಣಿಕೆಯ ಅತ್ಯುತ್ತಮ ಖಾದ್ಯಗಳನ್ನು ಮಾತ್ರ ಮೆನುವಿನಲ್ಲಿ ನೀಡಲಾಗಿದೆ. ಇದರಿಂದ ಪ್ರತಿಯೊಂದು ದೋಸೆಯ ರುಚಿ ಹಾಗೂ ಗುಣಮಟ್ಟವನ್ನು ಸದಾ ಒಂದೇ ರೀತಿ ಕಾಯ್ದುಕೊಳ್ಳಲು ಸಾಧ್ಯವಾಗಿದೆ.

ವೇಗದ ಸೇವೆ & ಡಿಜಿಟಲ್ ಸ್ಪರ್ಶ: ಗ್ರಾಹಕರೇ ಎಲೆಕ್ಟ್ರಾನಿಕ್ ವ್ಯವಸ್ಥೆಯ ಮೂಲಕ ಸ್ವಯಂ-ಆರ್ಡರ್ (Self-order) ಮಾಡಿ ಆಹಾರ ಪಡೆದುಕೊಳ್ಳುವ ವಿಧಾನ ಇಲ್ಲಿದೆ. ಇದರಿಂದ ಸಾರ್ವಜನಿಕರಿಗೆ ಯಾವುದೇ ವಿಳಂಬವಿಲ್ಲದೆ ತಕ್ಷಣವೇ ಬಿಸಿಬಿಸಿ ದೋಸೆ ಸಿಗುತ್ತಿದೆ.

ಕೈಗೆಟುಕುವ ದರ: ಪ್ರತಿಯೊಬ್ಬ ಸಾಮಾನ್ಯ ಗ್ರಾಹಕನೂ ಪದೇ ಪದೇ ಬಂದು ಸವಿಯಲು ಅನುಕೂಲವಾಗುವಂತೆ ಅತ್ಯಂತ ನ್ಯಾಯಯುತ ಬೆಲೆಯನ್ನು ನಿಗದಿಪಡಿಸಲಾಗಿದೆ.

ದೊಡ್ಡ ಕ್ಯೂ ಮತ್ತು ಸೋಷಿಯಲ್ ಮೀಡಿಯಾ ಕ್ರೇಜ್: ಬಿಸಿಬಿಸಿ ದೋಸೆಗಾಗಿ ಹೋಟೆಲ್ ಮುಂದೆ ಸಾಲುಗಟ್ಟಿ ನಿಲ್ಲುವ ಗ್ರಾಹಕರ ಕ್ಯೂ, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿತು.

ಬಾಲಿವುಡ್ ತಾರೆಯರ ನೆಚ್ಚಿನ ತಾಣ:

ಬಾಲಿವುಡ್‌ನ ಖ್ಯಾತ ನಟ-ನಟಿಯರಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಸೇರಿದಂತೆ ಹಲವು ಗಣ್ಯರು ಈ ಕೆಫೆಗೆ ಭೇಟಿ ನೀಡಿ, ಬೆಣ್ಣೆ ದೋಸೆಯ ಸವಿ ಅನುಭವಿಸಿದ್ದಾರೆ. ಸೆಲೆಬ್ರಿಟಿಗಳ ಈ ಭೇಟಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಸೃಷ್ಟಿಸಿ, ಹೋಟೆಲ್‌ನ ಜನಪ್ರಿಯತೆಯನ್ನು ದ್ವಿಗುಣಗೊಳಿಸಿತು.

ಆಹಾರೋದ್ಯಮದ ಯಾವುದೇ ಪೂರ್ವಾಪರ ಅನುಭವವಿಲ್ಲದಿದ್ದರೂ, ಸಾಂಪ್ರದಾಯಿಕ ರುಚಿಯ ಮೇಲಿನ ಅತಿಯಾದ ಪ್ರೀತಿ ಹಾಗೂ ಕಟ್ಟುನಿಟ್ಟಾದ ನೈರ್ಮಲ್ಯವನ್ನು ಕಾಯ್ದುಕೊಂಡರೆ ಉದ್ಯಮದಲ್ಲಿ ಯಾವ ಮಟ್ಟದ ಯಶಸ್ಸು ಗಳಿಸಬಹುದು ಎಂಬುದಕ್ಕೆ ಈ ದಂಪತಿಯ ‘ಬೆಣ್ಣೆ’ ಕೆಫೆಯೇ ಅತ್ಯುತ್ತಮ ನಿದರ್ಶನ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: KKRTC ಗೆ 400 ಹೊಸ ಬಸ್ ಮಂಜೂರುಮನೆಗಳ್ಳತನ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ವಶಕ್ಕೆ: ಲಕ್ಷಾಂತರ ರೂ. ಮೌಲ್ಯದ ಆಭರಣ ವಶಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ BNP ಅಭ್ಯರ್ಥಿ ಮಿರ್ಜಾ ಫಖ್ರುಲ್ ಇಸ್ಲಾಂ ಅಲಂಗೀರ್ ಆಯ್ಕೆBREAKING: ಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ: ಅಮಿತ್ ಶಾ ಘೋಷಣೆಅನುಮತಿ ಇಲ್ಲದೆ ಸಚಿವ ಕೃಷ್ಣ ಬೈರೇಗೌಡರ ಪೋಸ್ಟರ್ ಅಂಟಿಸಿದ್ದ ವ್ಯಕ್ತಿ ವಿರುದ್ಧ ಕೇಸ್ ದಾಖಲುಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿKPME ಉಲ್ಲಂಘನೆ: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ದಂಡ, ಪರವಾನಗಿ ರದ್ದುಮೋದಿ ದೇವರಿಗೆ ಪೂಜೆ: ಭಕ್ತರಿಂದ ‘ಜೈ ಜೈ ಮೋದಿ, ಹರ್ ಹರ್ ಮೋದಿ’ ಘೋಷಣೆ; ದೆಹಲಿ ಪ್ರೆಸ್ ಕ್ಲಬ್‌ನಲ್ಲಿ ‘ಮೋದಿ ಚಾಲೀಸಾ’ ಕಾರ್ಯಕ್ರಮ!ತಪ್ಪಾಯ್ತು ಕ್ಷಮಿಸಿಬಿಡಿ: ರಸ್ತೆ ಮುಚ್ಚಿದ್ದಕ್ಕೆ ಭಾರತೀಯ ಸೇನೆಗೆ ‘ನಾನು GenZ’ ಎಚ್ಚರಿಕೆ ನೀಡಿದ್ದ ಯುವತಿಯಿಂದ ಕ್ಷಮೆಯಾಚನೆಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು; 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಸಿಎಂ ಡಿ.ಕೆ.ಶಿವಕುಮಾರ್ ಮನವಿ