LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಮಾನವೀಯತೆ ಇನ್ನೂ ಜೀವಂತ ! ಡೆಲಿವರಿ ಸಿಬ್ಬಂದಿಗಾಗಿ ನೀರಿನ ವ್ಯವಸ್ಥೆ ಮಾಡಿದ ಮಹಿಳೆ; ವಿಡಿಯೋ ವೈರಲ್.!

ಬೇಸಿಗೆ ಬಂದರೆ ಉರಿ ಬಿಸಿಲಿನ ತಾಪಮಾನ ಹೆಚ್ಚಾಗುತ್ತದೆ. ಇಂತಹ ಸಮಯದಲ್ಲಿ ನಾವು ಮನೆಯೊಳಗೆ ಎಸಿ, ಫ್ಯಾನ್‌ಗಳ ಸೌಲಭ್ಯದಲ್ಲಿ ಆರಾಮವಾಗಿ ಇರುತ್ತೇವೆ. ಆದರೆ ನಮ್ಮ ಆಹಾರ, ದಿನಸಿ ಹಾಗೂ ಅಗತ್ಯ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ಡೆಲಿವರಿ ಸಿಬ್ಬಂದಿ ಮಾತ್ರ ಬಿಸಿಲಿನ ತಾಪವನ್ನೂ ಲೆಕ್ಕಿಸದೇ ನಗರದೆಲ್ಲೆಡೆ ಬೈಕ್‌ನಲ್ಲಿ ಸಂಚರಿಸುತ್ತಿರುತ್ತಾರೆ. ಸ್ವಿಗ್ಗಿ, ಝೊಮಾಟೊ, ಜೆಪ್ಟೋ, ಬ್ಲಿಂಕಿಟ್, ಅಮೆಜಾನ್ ಸೇರಿದಂತೆ ಹಲವು ಸಂಸ್ಥೆಗಳ ಡೆಲಿವರಿ ಏಜೆಂಟ್‌ಗಳ ಕಷ್ಟ ಹೇಳತೀರದು.

ಇಂತಹ ಡೆಲಿವರಿ ಸಿಬ್ಬಂದಿಯ ಶ್ರಮವನ್ನು ಮನಗಂಡ ಮಹಿಳೆಯೊಬ್ಬರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಲಕ್ಷಾಂತರ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಆಕೆ ಮಾಡಿದ ಕೆಲಸ ದೊಡ್ಡದೇನೂ ಅಲ್ಲ. ತನ್ನ ಮನೆಯ ಹೊರಗೆ ಒಂದು ಸಣ್ಣ ಸ್ಟೂಲ್ ಇಟ್ಟು, ಅದರ ಮೇಲೆ ತಂಪು ನೀರಿನ ಬಾಟಲಿಗಳು ಹಾಗೂ ಒಂದು ಸ್ಟೀಲ್ ಗ್ಲಾಸ್ ಇಟ್ಟಿದ್ದಾಳೆ.

ಇದು ಸಣ್ಣ ಕೆಲಸವೆನಿಸಿದರೂ, ಉರಿ ಬಿಸಿಲಿನಲ್ಲಿ ಸಿಗುವ ಒಂದು ಗ್ಲಾಸ್ ನೀರು ಅಮೃತದಂತೆಯೇ. ಮಾನವೀಯತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆಯಾಗಿದೆ.

ವೈರಲ್ ವಿಡಿಯೋದಲ್ಲೇನಿದೆ?

ಈ ಮನಮುಟ್ಟುವ ವಿಡಿಯೋವನ್ನು @thoughtfully_designed ಎಂಬ ಇನ್‌ಸ್ಟಾಗ್ರಾಂ ಖಾತೆ ಹಂಚಿಕೊಂಡಿದೆ.

ವಿಡಿಯೋದಲ್ಲಿ ಮಹಿಳೆ ಪ್ರತಿದಿನ ಬೆಳಗ್ಗೆ ಎದ್ದ ಕೂಡಲೇ ಮನೆಯ ಹೊರಗೆ ಇಟ್ಟಿರುವ ಖಾಲಿ ನೀರಿನ ಬಾಟಲಿಗಳನ್ನು ತೆಗೆದುಕೊಂಡು ಅವುಗಳನ್ನು ಶುದ್ಧ ಕುಡಿಯುವ ನೀರಿನಿಂದ ತುಂಬಿ ಮತ್ತೆ ಅಲ್ಲಿಯೇ ಇಡುತ್ತಿರುವುದು ಕಾಣಿಸುತ್ತದೆ.

ಸ್ಟೂಲ್ ಮೇಲಿರುವ ಫಲಕದಲ್ಲಿ ಹೀಗೆ ಬರೆಯಲಾಗಿದೆ:

“ನೀರು – ಸ್ವಿಗ್ಗಿ, ಝೊಮಾಟೊ, ಜೆಪ್ಟೋ, ಬ್ಲಿಂಕಿಟ್, ಇನ್‌ಸ್ಟಾಮಾರ್ಟ್, ಅಮೆಜಾನ್, ಮಿಂತ್ರಾ ಹಾಗೂ ಡೆಲಿವರಿ ಸಿಬ್ಬಂದಿಗಾಗಿ.”

ಡೆಲಿವರಿ ಸಿಬ್ಬಂದಿಗೆ ಸುಲಭವಾಗಿ ಅರ್ಥವಾಗುವಂತೆ ಈ ಸಂದೇಶವನ್ನು ಹಲವು ಭಾಷೆಗಳಲ್ಲಿ ಬರೆಯಲಾಗಿದೆ. ಕಳೆದ ಎರಡು ವರ್ಷಗಳಿಂದ ಯಾವುದೇ ಪ್ರತಿಫಲದ ನಿರೀಕ್ಷೆಯಿಲ್ಲದೆ ಆಕೆ ಈ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, “ಈ ದಿನಗಳಲ್ಲಿ ಬಿಸಿಲು ಹೆಚ್ಚಾಗಿದೆ. ಪ್ರತಿದಿನ ಬಾಟಲಿಗಳು ಖಾಲಿಯಾಗುತ್ತಿವೆ” ಎಂದು ವಿಡಿಯೋದಲ್ಲಿ ಉಲ್ಲೇಖಿಸಿದ್ದಾಳೆ.

“ದಯೆ ದೊಡ್ಡ ಬದಲಾವಣೆಯನ್ನು ತರಬಲ್ಲದು

ವಿಡಿಯೋ ಹಂಚಿಕೊಂಡ ಮಹಿಳೆ, “ದಯೆ ಮತ್ತು ಕರುಣೆ ದೊಡ್ಡ ಪರಿಣಾಮಗಳನ್ನು ಉಂಟುಮಾಡುತ್ತವೆ. ನಿಮ್ಮ ಮನೆಗೆ ಪ್ರತಿದಿನ ಡೆಲಿವರಿ ಸಿಬ್ಬಂದಿ ಅಥವಾ ಕೆಲಸಗಾರರು ಬರುತ್ತಿದ್ದರೆ, ದಯವಿಟ್ಟು ಅವರಿಗಾಗಿ ಸ್ವಲ್ಪ ನೀರನ್ನು ಇಡಿ. ಹೊರಗಿನ ಬಿಸಿಲು ತುಂಬಾ ತೀವ್ರವಾಗಿದೆ” ಎಂದು ಬರೆದುಕೊಂಡಿದ್ದಾರೆ.

ಇಂದಿನ ದಿನಗಳಲ್ಲಿ ನಮ್ಮ ಆರ್ಡರ್ ಕೆಲವೇ ನಿಮಿಷ ತಡವಾದರೂ ನಾವು ಡೆಲಿವರಿ ಸಿಬ್ಬಂದಿಯ ಮೇಲೆ ಅಸಹನೆ ತೋರಿಸುತ್ತೇವೆ. ಆದರೆ ಅವರು ಎದುರಿಸುವ ಕಷ್ಟಗಳನ್ನು ಯೋಚಿಸುವವರು ಕಡಿಮೆ. ಇಂತಹ ಸಂದರ್ಭದಲ್ಲಿ ಈ ಮಹಿಳೆಯ ಕಾರ್ಯ ಎಲ್ಲರಿಗೂ ಉತ್ತಮ ಸಂದೇಶ ನೀಡಿದೆ.

ನೆಟ್ಟಿಗರಿಂದ ಮೆಚ್ಚುಗೆಯ ಮಹಾಪೂರ

ವಿಡಿಯೋ ವೈರಲ್ ಆದ ಬಳಿಕ ಸಾವಿರಾರು ಮಂದಿ ಮಹಿಳೆಯ ಕಾರ್ಯವನ್ನು ಶ್ಲಾಘಿಸಿದ್ದಾರೆ. ಅನೇಕರು, “ನಿಮ್ಮ ಈ ಸಣ್ಣ ಕೆಲಸ ನಮಗೆ ಸ್ಫೂರ್ತಿ ನೀಡಿದೆ. ಇಂದಿನಿಂದ ನಮ್ಮ ಮನೆಯ ಮುಂದೆ ಕೂಡ ನೀರಿನ ಬಾಟಲಿ ಇಡುತ್ತೇವೆ” ಎಂದು ಪ್ರತಿಕ್ರಿಯಿಸಿದ್ದಾರೆ.

ಇನ್ನೊಬ್ಬರು, “ನಮ್ಮ ತಂದೆ-ತಾಯಿ ಬೇಸಿಗೆಯಲ್ಲಿ ಫ್ರಿಜ್‌ನಲ್ಲಿ ಜ್ಯೂಸ್ ಪ್ಯಾಕ್‌ಗಳನ್ನು ಇಟ್ಟು, ಮನೆಗೆ ಬರುವ ಡೆಲಿವರಿ ಸಿಬ್ಬಂದಿ ಹಾಗೂ ಕಸ ಸಂಗ್ರಹಿಸುವವರಿಗೆ ನೀಡುತ್ತಾರೆ” ಎಂದು ತಮ್ಮ ಅನುಭವ ಹಂಚಿಕೊಂಡಿದ್ದಾರೆ.

ಸಹಾಯ ಮಾಡಲು ಕೋಟಿ ರೂಪಾಯಿಗಳ ಅಗತ್ಯವಿಲ್ಲ; ಒಳ್ಳೆಯ ಮನಸ್ಸಿದ್ದರೆ ಸಾಕು ಎಂಬುದನ್ನು ಈ ಮಹಿಳೆ ಸಾಬೀತುಪಡಿಸಿದ್ದಾರೆ. ನಮ್ಮ ಮನೆಗೆ ಬರುವ ಪ್ರತಿಯೊಬ್ಬ ಡೆಲಿವರಿ ಸಿಬ್ಬಂದಿಯೂ ಒಬ್ಬ ಮನುಷ್ಯ ಎಂಬುದನ್ನು ನಾವು ನೆನಪಿಡಬೇಕು. ಇನ್ನು ಮುಂದೆ ಅವರಿಗೆ ಕೇವಲ ರೇಟಿಂಗ್ ಅಥವಾ ಟಿಪ್ ನೀಡುವುದಷ್ಟೇ ಅಲ್ಲ, ಪ್ರೀತಿಯಿಂದ ಒಂದು ಗ್ಲಾಸ್ ನೀರು ನೀಡೋಣ. ಅವರ ಮುಖದಲ್ಲಿನ ನಗು ಯಾವುದೇ ಅಮೂಲ್ಯ ವಸ್ತುವಿಗಿಂತ ಮೌಲ್ಯಯುತವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್ಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ ಅಷ್ಟೇ: ಪೃಥ್ವಿರಾಜ್ ಸುಕುಮಾರನ್ ಖಡಕ್ ಹೇಳಿಕೆ; ವಿಡಿಯೊBREAKING: ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ರೌಡಿಶೀಟರ್ ಸಾವುBREAKING NEWS: RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರಿಯಾಂಕ್ ಖರ್ಗೆ, ನಲಪಾಡ್ ಗೆ ಸಮನ್ಸ್ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ಹೇಡಿತನದ ಕೃತ್ಯ: ಬಿ.ಕೆ.ಹರಿಪ್ರಸಾದ್BIG NEWS: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಕೇಸ್: ಚಂಪತ್ ರಾಯ್ ರಾಜೀನಾಮೆ ದೃಢಪಡಿಸಿದ ಟ್ರಸ್ಟ್, ಜು. 11ರಂದು ಪ್ರಮುಖರ ಸಭೆBREAKING NEWS: ರಾಷ್ಟ್ರ ರಾಜಧಾನಿ ದೆಹಲಿ, ಕಣಿವೆ ರಾಜ್ಯ ಜಮ್ಮು –ಕಾಶ್ಮೀರದಲ್ಲಿ ಪ್ರಬಲ ಭೂಕಂಪ: ಆಫ್ಘಾನಿಸ್ತಾನದಲ್ಲೂ ನಡುಗಿದ ಭೂಮಿFIFA ವಿಶ್ವಕಪ್: ಕೊಲಂಬಿಯಾ ಪಂದ್ಯಕ್ಕೂ ಮುನ್ನ ವಿಶೇಷ ಚಿನ್ನದ ಬಣ್ಣದ ಬೂಟುಗಳಲ್ಲಿ ತರಬೇತಿ ಪಡೆದ ಕ್ರಿಸ್ಟಿಯಾನೊ ರೊನಾಲ್ಡೊ