LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ರೆಸಾರ್ಟ್ ಪಾಲಿಟಿಕ್ಸ್ ಮಧ್ಯೆ ಬಿಜೆಪಿಗೆ ಶಾಕ್ ಕೊಟ್ರಾ ವಿಜಯಪುರದ ಹುಲಿ? ಯತ್ನಾಳ್ ಬರೆದ ಆ ಒಂದು ಸಾಲಿನಿಂದ ಹಸ್ತ-ಕಮಲ ಪಾಳೆಯದ ಲೆಕ್ಕಾಚಾರ ಉಲ್ಟಾಪಲ್ಟಾ ಏನಿದೆ ಆ ಪತ್ರದಲ್ಲಿ?

ಇಡೀ ಕರ್ನಾಟಕ ರಾಜಕಾರಣವೇ ಕಾಯುತ್ತಿದ್ದ ಆ ಹೈ-ವೋಲ್ಟೇಜ್ ಕ್ಲೈಮ್ಯಾಕ್ಸ್ ಕೊನೆಗೂ ಆರಂಭವಾಗಿದೆ ವಿಧಾನಪರಿಷತ್‌ನ (MLC Election) 7 ಸ್ಥಾನಗಳಿಗಾಗಿ ಹಸ್ತ-ಕಮಲ ಪಾಳೆಯದ ಮಧ್ಯೆ ಮಹಾ ಯುದ್ಧವೇ ನಡೀತಿದ್ದು, ಕಣದಲ್ಲಿ 8 ಜನ ಇರುವುದರಿಂದ 7ನೇ ಸೀಟಿನ ಆಟ ರೋಚಕ ಘಟ್ಟ ತಲುಪಿದೆ. ಒಂದೆಡೆ ಕಾಂಗ್ರೆಸ್ ಮ್ಯಾಜಿಕ್ ನಂಬರ್ ಲೆಕ್ಕಾಚಾರ, ಇನ್ನೊಂದೆಡೆ ದಳಪತಿಗಳ ರೆಸಾರ್ಟ್ ಚದುರಂಗದಾಟ ಈ ಬಿಗ್ ಬ್ಯಾಟಲ್ ಮಧ್ಯೆ, ಇಡೀ ರಾಜ್ಯ ಯಾರ ವೋಟ್ ಮೇಲೆ ಕಣ್ಣಿಟ್ಟಿತ್ತೋ ಆ ವಿಜಯಪುರದ ಹುಲಿ ಬಸನಗೌಡ ಪಾಟೀಲ್ ಯತ್ನಾಳ್ (Basanagouda Patil Yatnal) ಕೊನೆ ಹಂತದಲ್ಲಿ ಶೂಟ್ ಮಾಡಿದ ಆ ಒಂದು ಸೀಕ್ರೆಟ್ ಲೆಟರ್ ಬಾಂಬ್ ಇಡೀ ಕಮಲ ಪಾಳೆಯಕ್ಕೆ ಬಿಗ್ ಸರ್ಪ್ರೈಸ್ ಕೊಟ್ಟಿದೆ”

ಇತ್ತ ಜೆಡಿಎಸ್‌ನ ಹಿರಿಯ ನಾಯಕ ಜಿ.ಟಿ. ದೇವೇಗೌಡರು ಅಡ್ಡ ಮತದಾನ ಮಾಡಿರುವ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದು, ರಾಜಕೀಯ ಕಾರಿಡಾರ್‌ನಲ್ಲಿ ಸಂಚಲನ ಸೃಷ್ಟಿಸಿದೆ.

ನಿತಿನ್ ನಬಿನ್‌ಗೆ ಯತ್ನಾಳ್ ಪತ್ರ: “ನಾನು ಬಂಡಾಯಗಾರನಲ್ಲ” (The Yatnal Stance)

ಬಿಜೆಪಿ ರಾಜ್ಯ ನಾಯಕರ ವಿರುದ್ಧ ನಿರಂತರವಾಗಿ ಗುದ್ದಾಡುತ್ತಾ, ಪಕ್ಷದಿಂದ ಉಚ್ಚಾಟನೆಗೊಂಡಿರುವ ಬಸನಗೌಡ ಪಾಟೀಲ್ ಯತ್ನಾಳ್ ಅವರ ವೋಟ್ ಯಾರಿಗೆ ಬೀಳಲಿದೆ ಎಂಬುದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಆದರೆ, ಮತದಾನದ ಬೆನ್ನಲ್ಲೇ ಬಿಜೆಪಿ ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಅವರಿಗೆ ಪತ್ರ ಬರೆಯುವ ಮೂಲಕ ಯತ್ನಾಳ್ ತಮ್ಮ ನಿಲುವನ್ನು ಕಡಕ್ ಆಗಿ ಸ್ಪಷ್ಟಪಡಿಸಿದ್ದಾರೆ:

ಯತ್ನಾಳ್ ಎಕ್ಸ್ (X) ಪೋಸ್ಟ್ :

“ವಿಧಾನ ಪರಿಷತ್ ಚುನಾವಣೆಯ ಕುರಿತು ನನ್ನ ನಿಲುವನ್ನು ಸ್ಪಷ್ಟಪಡಿಸಲು ನಾನು ರಾಷ್ಟ್ರೀಯ ನಾಯಕ ನಿತಿನ್ ನಬಿನ್ ಅವರಿಗೆ ಪತ್ರ ಬರೆದಿದ್ದೇನೆ. ನಾನು ಯಾವುದೇ ರೀತಿಯಲ್ಲಿ ಭಿನ್ನಮತೀಯನಲ್ಲ ಅಥವಾ ಬಂಡಾಯಗಾರನೂ ಅಲ್ಲ. ವಿಜಯಪುರದ ಶ್ರೇಷ್ಠ ಜನತೆ ನನ್ನನ್ನು ಯಾವ ಪಕ್ಷದ ಚಿಹ್ನೆಯಿಂದ ಆಯ್ಕೆ ಮಾಡಿದ್ದಾರೋ, ಅದೇ ಬಿಜೆಪಿಗೆ ಮತ ಹಾಕಲು ನಾನು ನೈತಿಕವಾಗಿ ಬದ್ಧನಾಗಿದ್ದೇನೆ. ಆದರೆ, ಬಿಜೆಪಿಗೆ ನಾನು ಹಾಕುವ ಈ ಮತವು ಮರಳಿ ಬರುವ ಮುನ್ಸೂಚನೆಯಂತೂ ಖಂಡಿತ ಅಲ್ಲ” ಎಂದು ಸೂಚ್ಯವಾಗಿ ಬರೆದುಕೊಂಡಿದ್ದಾರೆ.

ಈ ಮೂಲಕ ತಮಗೆ ಪಕ್ಷದ ಮೇಲೆ ನಿಷ್ಠೆ ಇದೆಯೇ ಹೊರತು ರಾಜ್ಯದ ಕೆಲವು ನಾಯಕರ ಮೇಲಲ್ಲ ಎಂಬ ಸಂದೇಶವನ್ನು ಯತ್ನಾಳ್ ರವಾನಿಸಿದ್ದಾರೆ.

ಜಿಟಿಡಿಯಿಂದ ಅಡ್ಡ ಮತದಾನದ ಶಾಕ್? ಜೆಡಿಎಸ್‌ನಿಂದ ಉಚ್ಚಾಟನೆ ಫಿಕ್ಸ್?

ಇಂದಿನ ಚುನಾವಣೆಯ ಮತ್ತೊಂದು ಬಿಗ್ ಟ್ವಿಸ್ಟ್ ಎಂದರೆ ಜೆಡಿಎಸ್‌ನ ಜಿ.ಟಿ. ದೇವೇಗೌಡರ ನಡೆ ಮಗನೇ ವಿಪ್ ಜಾರಿ ಮಾಡಿದ್ದರೂ ರೆಸಾರ್ಟ್‌ನಿಂದ ದೂರ ಉಳಿದಿದ್ದ ಜಿಟಿಡಿ, ಇಂದು ನೇರವಾಗಿ ವಿಧಾನಸೌಧಕ್ಕೆ ಬಂದು ಮತ ಚಲಾಯಿಸಿದ್ದಾರೆ. ಆದರೆ, ಅವರು ಮೈತ್ರಿ ಅಭ್ಯರ್ಥಿಯ ಕೈ ಬಿಟ್ಟು ಕಾಂಗ್ರೆಸ್ ಪರ ಅಡ್ಡ ಮತದಾನ (Cross Voting) ಮಾಡಿದ್ದಾರೆ ಎನ್ನುವ ಸಾರು ರಾಜಕೀಯ ವಲಯದಲ್ಲಿ ಜೋರಾಗಿ ಕೇಳಿಬರುತ್ತಿದೆ. ಈ ಹಿನ್ನೆಲೆಯಲ್ಲಿ ಅವರನ್ನು ಜೆಡಿಎಸ್ ಪಕ್ಷದಿಂದ ಶೀಘ್ರದಲ್ಲೇ ಉಚ್ಚಾಟಿಸಲಾಗುವುದು ಎಂಬ ಇನ್‌ಸೈಡ್ ಸುದ್ದಿಗಳು ದಟ್ಟವಾಗಿವೆ.

ಮೂವರ ಮತಗಳ ಮೇಲೆ ಇತ್ತು ಹಸ್ತ-ಕಮಲ ಪಾಳೆಯದ ಕಣ್ಣು

ಪರಿಷತ್‌ನ 7ನೇ ಸೀಟಿನ ಗೆಲುವಿಗಾಗಿ ತೀವ್ರ ಫೈಟ್ ನಡೆಯುತ್ತಿರುವುದರಿಂದ, ಪ್ರಮುಖವಾಗಿ ಮೂವರು ಶಾಸಕರ ಮತಗಳನ್ನು ಸೆಳೆಯಲು ತೆರೆಮರೆಯಲ್ಲಿ ಭಾರಿ ಆಪರೇಷನ್ ನಡೆದಿತ್ತು:

ಬಸನಗೌಡ ಪಾಟೀಲ್ ಯತ್ನಾಳ್ (ಬಿಜೆಪಿಯಿಂದ ಉಚ್ಚಾಟಿತ)

ಎಸ್.ಟಿ. ಸೋಮಶೇಖರ್ (ಬಿಜೆಪಿಯಿಂದ ದೂರವಾಗಿರುವ ಶಾಸಕ)

ಶಿವರಾಮ್ ಹೆಬ್ಬಾರ್ (ಬಿಜೆಪಿಯಿಂದ ದೂರವಾಗಿರುವ ಶಾಸಕ)

ಯತ್ನಾಳ್ ಅವರು ಈಗಾಗಲೇ “ನನ್ನ ಮತ ಬಿಜೆಪಿಗೆ” ಎಂದು ಘೋಷಿಸಿ ಕಾಂಗ್ರೆಸ್ ಲೆಕ್ಕಾಚಾರ ಉಲ್ಟಾ ಮಾಡಿದ್ದಾರೆ. ಆದರೆ ಹೆಬ್ಬಾರ್ ಮತ್ತು ಸೋಮಶೇಖರ್ ಅವರ ನಡೆ ಸದ್ಯಕ್ಕೆ ನಿಗೂಢವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್ಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ ಅಷ್ಟೇ: ಪೃಥ್ವಿರಾಜ್ ಸುಕುಮಾರನ್ ಖಡಕ್ ಹೇಳಿಕೆ; ವಿಡಿಯೊBREAKING: ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ರೌಡಿಶೀಟರ್ ಸಾವುBREAKING NEWS: RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರಿಯಾಂಕ್ ಖರ್ಗೆ, ನಲಪಾಡ್ ಗೆ ಸಮನ್ಸ್ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ಹೇಡಿತನದ ಕೃತ್ಯ: ಬಿ.ಕೆ.ಹರಿಪ್ರಸಾದ್BIG NEWS: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಕೇಸ್: ಚಂಪತ್ ರಾಯ್ ರಾಜೀನಾಮೆ ದೃಢಪಡಿಸಿದ ಟ್ರಸ್ಟ್, ಜು. 11ರಂದು ಪ್ರಮುಖರ ಸಭೆBREAKING NEWS: ರಾಷ್ಟ್ರ ರಾಜಧಾನಿ ದೆಹಲಿ, ಕಣಿವೆ ರಾಜ್ಯ ಜಮ್ಮು –ಕಾಶ್ಮೀರದಲ್ಲಿ ಪ್ರಬಲ ಭೂಕಂಪ: ಆಫ್ಘಾನಿಸ್ತಾನದಲ್ಲೂ ನಡುಗಿದ ಭೂಮಿFIFA ವಿಶ್ವಕಪ್: ಕೊಲಂಬಿಯಾ ಪಂದ್ಯಕ್ಕೂ ಮುನ್ನ ವಿಶೇಷ ಚಿನ್ನದ ಬಣ್ಣದ ಬೂಟುಗಳಲ್ಲಿ ತರಬೇತಿ ಪಡೆದ ಕ್ರಿಸ್ಟಿಯಾನೊ ರೊನಾಲ್ಡೊ