LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಸೆಕ್ಯುರಿಟಿ ಡೆಪಾಸಿಟ್ ನಿಯಮಗಳು: ಬಾಡಿಗೆದಾರರೇ ಮನೆ/ಮಳಿಗೆ ಖಾಲಿ ಮಾಡುವ ಮುನ್ನ ಈ ವಿಷಯ ತಿಳಿದಿರಲಿ

ಬೆಂಗಳೂರು: ದೇಶದಲ್ಲಿ ಮನೆ ಅಥವಾ ವಾಣಿಜ್ಯ ಮಳಿಗೆಗಳನ್ನು ಬಾಡಿಗೆಗೆ ಪಡೆಯುವಾಗ ಸೆಕ್ಯುರಿಟಿ ಡೆಪಾಸಿಟ್ (ಭದ್ರತಾ ಠೇವಣಿ) ನೀಡುವುದು ಸಾಮಾನ್ಯ. ಆದರೆ, ಮಾಲೀಕರು ಎಷ್ಟು ಡೆಪಾಸಿಟ್ ಕೇಳಬಹುದು? ಮನೆ ಖಾಲಿ ಮಾಡುವಾಗ ಯಾವ ಆಧಾರದ ಮೇಲೆ ಹಣ ಕಡಿತಗೊಳಿಸಬಹುದು? ಈ ಬಗ್ಗೆ ಕಾನೂನು ಏನು ಹೇಳುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಸೆಕ್ಯುರಿಟಿ ಡೆಪಾಸಿಟ್‌ಗೆ ಕಾನೂನಿನ ಮಿತಿ ಇದೆಯೇ?


ಕೇಂದ್ರ ಸರ್ಕಾರದ ಮಾದರಿ ಬಾಡಿಗೆ ಕಾಯ್ದೆ, 2021 (Model Tenancy Act) ರ ಪ್ರಕಾರ ಸೆಕ್ಯುರಿಟಿ ಡೆಪಾಸಿಟ್‌ಗೆ ಸ್ಪಷ್ಟ ಮಿತಿ ಹೇರಲಾಗಿದೆ:

ವಸತಿ ಮನೆಗಳಿಗೆ: ಗರಿಷ್ಠ 2 ತಿಂಗಳ ಬಾಡಿಗೆ.

ವಾಣಿಜ್ಯ (Commercial) ಆಸ್ತಿಗಳಿಗೆ: ಗರಿಷ್ಠ 6 ತಿಂಗಳ ಬಾಡಿಗೆ.

ನೆನಪಿರಲಿ: ಈ ಕಾಯ್ದೆಯನ್ನು ಎಲ್ಲಾ ರಾಜ್ಯಗಳು ಇನ್ನೂ ಏಕರೂಪವಾಗಿ ಜಾರಿಗೆ ತಂದಿಲ್ಲ. ಸುಪ್ರೀಂ ಕೋರ್ಟ್ ವಕೀಲರಾದ ತುಷಾರ್ ಕುಮಾರ್ ಅವರ ಪ್ರಕಾರ, “ದೆಹಲಿ, ಬೆಂಗಳೂರಿನಂತಹ ಪ್ರಮುಖ ನಗರಗಳಲ್ಲಿ ಇಂದಿಗೂ ಮಾರುಕಟ್ಟೆಯ ವಾಡಿಕೆ ಹಾಗೂ ಮಾಲೀಕ-ಬಾಡಿಗೆದಾರರ ನಡುವಿನ ಒಪ್ಪಂದದ ಆಧಾರದ ಮೇಲೆಯೇ ಡೆಪಾಸಿಟ್ ನಿರ್ಧಾರವಾಗುತ್ತಿದೆ.” ಆದರೆ, ಈ ಮೊತ್ತವು ಅಸಮಂಜಸವಾಗಿ ಅಥವಾ ಅನ್ಯಾಯವಾಗಿ ಇರಬಾರದು ಎಂದು ಅವರು ಸ್ಪಷ್ಟಪಡಿಸುತ್ತಾರೆ.

ಡೆಪಾಸಿಟ್ ಹಣದಲ್ಲಿ ಯಾವ ಕಡಿತಗಳನ್ನು (Deductions) ಮಾಡಬಹುದು?


ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ಸದಸ್ಯರಾದ ಹರ್ಷಲ್ ದಿಲ್ವಾಲಿ ಅವರ ಪ್ರಕಾರ, ಮಾಲೀಕರು ಸಿಕ್ಕಸಿಕ್ಕ ಕಾರಣಗಳಿಗೆ ಹಣ ಕಡಿತಗೊಳಿಸುವಂತಿಲ್ಲ. ಕೇವಲ ಈ ಕೆಳಗಿನ ಕಾರಣಗಳಿಗೆ ಮಾತ್ರ ಕಡಿತ ಸಿಂಧುವಾಗುತ್ತದೆ:

ಬಾಕಿ ಇರುವ ಬಾಡಿಗೆ ಅಥವಾ ಯುಟಿಲಿಟಿ ಬಿಲ್‌ಗಳು (ವಿದ್ಯುತ್, ನೀರಿನ ಬಿಲ್ ಇತ್ಯಾದಿ).

ಬಾಡಿಗೆದಾರರ ನಿರ್ಲಕ್ಷ್ಯದಿಂದಾದ ಹಾನಿ: ಗ್ಲಾಸ್ ಒಡೆಯುವುದು, ಫಿಕ್ಚರ್‌ಗಳನ್ನು ಹಾಳು ಮಾಡುವುದು ಅಥವಾ ತೀವ್ರವಾದ ಕಲೆಗಳು.

ಸಾಮಾನ್ಯ ಸವಕಳಿಗೆ ಹಣ ಹಿಡಿಯುವಂತಿಲ್ಲ:
ಗೋಡೆಯ ಬಣ್ಣ ಮಸುಕಾಗುವುದು ಅಥವಾ ದಿನಬಳಕೆಯಿಂದ ತಾನಾಗಿಯೇ ಆಗುವ ಸಣ್ಣಪುಟ್ಟ ಸವೆತಗಳನ್ನು (Normal wear and tear) ನೆಪವಾಗಿಸಿ ಹಣ ಕಡಿತಗೊಳಿಸುವಂತಿಲ್ಲ. ಇನ್ನು ಮನೆಗೆ ಸುಣ್ಣ-ಬಣ್ಣ ಬಳಿಯುವ (Painting) ಅಥವಾ ಕ್ಲೀನಿಂಗ್ ವೆಚ್ಚವನ್ನು ಬಾಡಿಗೆ ಒಪ್ಪಂದದಲ್ಲಿ (Rent Agreement) ಮೊದಲೇ ಉಲ್ಲೇಖಿಸಿದ್ದರೆ ಮಾತ್ರ ಕಡಿತಗೊಳಿಸಲು ಅವಕಾಶವಿರುತ್ತದೆ.

ಡೆಪಾಸಿಟ್ ಹಣ ಮರಳಿ ನೀಡಲು ಕಾಲಮಿತಿ ಏನು?
ವಸತಿ ಮನೆಗಳು: ಮಾದರಿ ಬಾಡಿಗೆ ಕಾಯ್ದೆಯಡಿ, ಬಾಡಿಗೆದಾರರು ಆಸ್ತಿಯನ್ನು ಖಾಲಿ ಮಾಡಿದ ಒಂದು ತಿಂಗಳ ಒಳಗಾಗಿ ಮಾಲೀಕರು ಬಾಕಿ ಡೆಪಾಸಿಟ್ ಹಣವನ್ನು ಹಿಂತಿರುಗಿಸಬೇಕು.

ವಾಣಿಜ್ಯ ಆಸ್ತಿಗಳು: ಸಾಮಾನ್ಯವಾಗಿ ಒಪ್ಪಂದ ಮುಗಿದ ೧೫ ರಿಂದ ೩೦ ದಿನಗಳ ಒಳಗಾಗಿ ಹಣ ರೀಫಂಡ್ ಮಾಡಬೇಕು.

ಕಾಯ್ದೆ ಜಾರಿಯಲ್ಲಿಲ್ಲದ ಕಡೆಗಳಲ್ಲಿ, ಬಾಡಿಗೆ ಒಪ್ಪಂದದಲ್ಲಿ ಬರೆದುಕೊಂಡಿರುವ ಸಮಯದ ಮಿತಿಯೇ ಅಂತಿಮವಾಗಿರುತ್ತದೆ.

ಮಾಲೀಕರು ಹಣ ನೀಡದಿದ್ದರೆ ಬಾಡಿಗೆದಾರರ ಮುಂದಿರುವ ಆಯ್ಕೆಗಳೇನು?


ಒಂದು ವೇಳೆ ಮಾಲೀಕರು ಡೆಪಾಸಿಟ್ ಮರಳಿ ನೀಡಲು ಸಕಾಲದಲ್ಲಿ ಸ್ಪಂದಿಸದಿದ್ದರೆ ಅಥವಾ ಅಕ್ರಮವಾಗಿ ಹಣ ಕಡಿತಗೊಳಿಸಿದರೆ, ಈ ಕ್ರಮಗಳನ್ನು ಕೈಗೊಳ್ಳಬಹುದು ಎಂದು ಕಾನೂನು ತಜ್ಞರು ಸಲಹೆ ನೀಡುತ್ತಾರೆ:

ದಾಖಲೆಗಳೊಂದಿಗೆ ಔಪಚಾರಿಕ ಮಾತುಕತೆ: ಮನೆ ಖಾಲಿ ಮಾಡುವಾಗ ಇದ್ದ ಸ್ಥಿತಿಯ ಫೋಟೋಗಳು, ಪೇಮೆಂಟ್ ರಶೀದಿಗಳು ಮತ್ತು ಬಾಡಿಗೆ ಒಪ್ಪಂದದ ಪ್ರತಿಯೊಂದಿಗೆ ಮಾಲೀಕರನ್ನು ಲಿಖಿತವಾಗಿ ಸಂಪರ್ಕಿಸಿ.

ಲೀಗಲ್ ನೋಟಿಸ್: ಸಮಸ್ಯೆ ಬಗೆಹರಿಯದಿದ್ದರೆ, ವಕೀಲರ ಮೂಲಕ ಮಾಲೀಕರಿಗೆ ಕಾನೂನು ನೋಟಿಸ್ ಕಳುಹಿಸುವುದು ಅತ್ಯಂತ ಪರಿಣಾಮಕಾರಿ ಮಾರ್ಗ.

ಬಾಡಿಗೆ ಪ್ರಾಧಿಕಾರಕ್ಕೆ ದೂರು: ಕಾಯ್ದೆ ಜಾರಿಯಲ್ಲಿರುವ ಪ್ರದೇಶಗಳಲ್ಲಿ ‘ಬಾಡಿಗೆ ಪ್ರಾಧಿಕಾರ’ವನ್ನು (Rent Authority) ಅಥವಾ ಸಿವಿಲ್ ನ್ಯಾಯಾಲಯವನ್ನು ಸಂಪರ್ಕಿಸಬಹುದು.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್ಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ ಅಷ್ಟೇ: ಪೃಥ್ವಿರಾಜ್ ಸುಕುಮಾರನ್ ಖಡಕ್ ಹೇಳಿಕೆ; ವಿಡಿಯೊBREAKING: ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ರೌಡಿಶೀಟರ್ ಸಾವುBREAKING NEWS: RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರಿಯಾಂಕ್ ಖರ್ಗೆ, ನಲಪಾಡ್ ಗೆ ಸಮನ್ಸ್ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ಹೇಡಿತನದ ಕೃತ್ಯ: ಬಿ.ಕೆ.ಹರಿಪ್ರಸಾದ್BIG NEWS: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಕೇಸ್: ಚಂಪತ್ ರಾಯ್ ರಾಜೀನಾಮೆ ದೃಢಪಡಿಸಿದ ಟ್ರಸ್ಟ್, ಜು. 11ರಂದು ಪ್ರಮುಖರ ಸಭೆBREAKING NEWS: ರಾಷ್ಟ್ರ ರಾಜಧಾನಿ ದೆಹಲಿ, ಕಣಿವೆ ರಾಜ್ಯ ಜಮ್ಮು –ಕಾಶ್ಮೀರದಲ್ಲಿ ಪ್ರಬಲ ಭೂಕಂಪ: ಆಫ್ಘಾನಿಸ್ತಾನದಲ್ಲೂ ನಡುಗಿದ ಭೂಮಿFIFA ವಿಶ್ವಕಪ್: ಕೊಲಂಬಿಯಾ ಪಂದ್ಯಕ್ಕೂ ಮುನ್ನ ವಿಶೇಷ ಚಿನ್ನದ ಬಣ್ಣದ ಬೂಟುಗಳಲ್ಲಿ ತರಬೇತಿ ಪಡೆದ ಕ್ರಿಸ್ಟಿಯಾನೊ ರೊನಾಲ್ಡೊ