ಕರ್ನಾಟಕ ಸರ್ಕಾರವು ರಾಜ್ಯದಲ್ಲಿ ನೂತನ ಮುಖ್ಯಮಂತ್ರಿಯವರ ಪದಗ್ರಹಣ ಮತ್ತು ಗೌಪ್ಯತಾ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಹಿನ್ನೆಲೆಯಲ್ಲಿ ತುರ್ತು ಸಿದ್ಧತೆಗಳನ್ನು ಆರಂಭಿಸಿದೆ. ಮುಖ್ಯಮಂತ್ರಿಯವರ ಪದಗ್ರಹಣ ಸಮಾರಂಭದಲ್ಲಿ ಪಾಲ್ಗೊಳ್ಳುವ ಗಣ್ಯರ ಶಿಷ್ಟಾಚಾರ ಮತ್ತು ಭದ್ರತೆಯ ಉದ್ದೇಶಕ್ಕಾಗಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಒಟ್ಟು 100 ಡಿ.ವಿ (D.V) ವಾಹನಗಳನ್ನು ಬೆಂಗಳೂರಿಗೆ ಕಳುಹಿಸಲು ಸರ್ಕಾರ ಆದೇಶಿಸಿದೆ.
ಈ ಸಂಬಂಧ ಸರ್ಕಾರವು ಅಧಿಕೃತ ಪತ್ರವನ್ನು ಹೊರಡಿಸಿದ್ದು, ಜಿಲ್ಲಾಧಿಕಾರಿಗಳಿಗೆ ಈ ವಾಹನಗಳನ್ನು ತುರ್ತಾಗಿ ನಿಯೋಜಿಸುವಂತೆ ಸೂಚಿಸಲಾಗಿದೆ.ಆಯಾ ಜಿಲ್ಲೆಗಳಿಂದ ನಿಯೋಜಿಸಲ್ಪಟ್ಟ ವಾಹನಗಳು ಮೇ 31, 2026 ರಂದು ಸಂಜೆ 4:00 ಗಂಟೆಯೊಳಗೆ ಬೆಂಗಳೂರಿನ ಕುಮಾರ ಕೃಪ ಅತಿಥಿ ಗೃಹದಲ್ಲಿ ವರದಿ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ.
ಸೂಚನೆ: ವಾಹನಗಳು ಸುಸ್ಥಿತಿಯಲ್ಲಿರಬೇಕು ಮತ್ತು ಇಂಧನ ಭರ್ತಿಯಾಗಿರಬೇಕು ಎಂದು ಕಡ್ಡಾಯಗೊಳಿಸಲಾಗಿದೆ. ಒಂದು ವೇಳೆ ನಿಗದಿತ ವಾಹನಗಳು ದುರಸ್ತಿಯಲ್ಲಿದ್ದರೆ, ಬದಲಾಗಿ ಬೇರೆ ಸುಸ್ಥಿತಿಯಲ್ಲಿರುವ ವಾಹನಗಳನ್ನು ಚಾಲಕರೊಂದಿಗೆ ಕಳುಹಿಸಲು ತಿಳಿಸಲಾಗಿದೆ.
ಶಿಸ್ತಿನ ಎಚ್ಚರಿಕೆ: ಇದು ಅತ್ಯಂತ ತುರ್ತು ಕಾರ್ಯವಾಗಿರುವುದರಿಂದ, ಯಾವುದೇ ಲೋಪವಾದಲ್ಲಿ ಸಂಬಂಧಪಟ್ಟವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.
ಜಿಲ್ಲಾವಾರು ವಾಹನಗಳ ವಿವರ (ಒಟ್ಟು 100):
ಚಿತ್ರದುರ್ಗ: 05, ಶಿವಮೊಗ್ಗ: 05, ಕೊಪ್ಪಳ: 03, ದಾವಣಗೆರೆ: 03, ಹಾವೇರಿ: 03, ಗದಗ: 05, ವಿಜಯಪುರ: 02, ಬಾಗಲಕೋಟೆ: 02, ರಾಯಚೂರು: 05, ಕಲಬುರಗಿ: 05, ಉತ್ತರ ಕನ್ನಡ: 05, ಬಳ್ಳಾರಿ: 05, ದಕ್ಷಿಣ ಕನ್ನಡ: 05, ಮೈಸೂರು: 05, ಧಾರವಾಡ: 05, ಉಡುಪಿ: 05, ಹಾಸನ: 02, ಚಾಮರಾಜನಗರ: 04, ಬೀದರ್: 02, ಚಿಕ್ಕಬಳ್ಳಾಪುರ: 02, ಚಿಕ್ಕಮಗಳೂರು: 02, ಕೊಡಗು: 02, ಕೋಲಾರ: 02, ಮಂಡ್ಯ: 02, ಬೆಂಗಳೂರು ದಕ್ಷಿಣ: 01, ತುಮಕೂರು: 03, ವಿಜಯನಗರ: 02, ಯಾದಗಿರಿ: 02, ಬೆಳಗಾವಿ: 06.

