LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಿಂಗಳಿಗೆ ₹3.5 ಲಕ್ಷ ಸಂಬಳ ಇದ್ರೂ 50,000 ಉಳಿಸುವುದು ಕಷ್ಟ ; ಬೆಂಗಳೂರಿನ ಟೆಕ್ಕಿಯ ಪೋಸ್ಟ್ ವೈರಲ್.!

ಇಂದಿನ ಕಾಲದಲ್ಲಿ ದೊಡ್ಡ ಸಂಬಳ ಗಳಿಸುತ್ತಿದ್ದರೂ ಅನೇಕರು ಆರ್ಥಿಕ ಒತ್ತಡ ಮತ್ತು ಮಾನಸಿಕ ಆತಂಕಗಳನ್ನು ಎದುರಿಸುತ್ತಿದ್ದಾರೆ. ಸಂಬಳ ಎಷ್ಟೇ ಬಂದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ ಎಂಬ ಬೇಸರ ಮಧ್ಯಮ ವರ್ಗದಿಂದ ಹಿಡಿದು ಉನ್ನತ ವರ್ಗದವರಲ್ಲಿಯೂ ಕಂಡುಬರುತ್ತಿದೆ.

ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರು ಸಾಮಾಜಿಕ ಜಾಲತಾಣ ರೆಡಿಟ್ನಲ್ಲಿ ಹಂಚಿಕೊಂಡ ಪೋಸ್ಟ್‌ ಭಾರೀ ಚರ್ಚೆಗೆ ಕಾರಣವಾಗಿದೆ. ತೆರಿಗೆಗಳ ನಂತರ ತಿಂಗಳಿಗೆ ₹3.5 ಲಕ್ಷ ನಿವ್ವಳ ಆದಾಯ ಬಂದರೂ, ತಾನು ₹50 ಸಾವಿರವೂ ಸರಿಯಾಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

34 ವರ್ಷದ ಈ ಸಾಫ್ಟ್‌ವೇರ್ ಉದ್ಯೋಗಿ ಬೆಂಗಳೂರಿನಲ್ಲಿ ತನ್ನ ನಾಲ್ಕು ವರ್ಷದ ಅವಳಿ ಪುತ್ರಿಯರೊಂದಿಗೆ ವಾಸಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೆಚ್ಚಗಳಿಂದ ತನ್ನ ಆರ್ಥಿಕ ಭದ್ರತೆ ಬಗ್ಗೆ ತೀವ್ರ ಆತಂಕ ಉಂಟಾಗಿದೆ ಎಂದು ಹೇಳಿದ್ದಾರೆ.ನನ್ನ ವಾರ್ಷಿಕ ಪ್ಯಾಕೇಜ್ ₹96 ಲಕ್ಷ. ತೆರಿಗೆ ಕಡಿತವಾದ ಬಳಿಕ ತಿಂಗಳಿಗೆ ₹3.5 ಲಕ್ಷ ಸಂಬಳ ಕೈಗೆ ಬರುತ್ತದೆ. ಉಳಿದ ₹35 ಲಕ್ಷ ESOPs ರೂಪದಲ್ಲಿವೆ. ನಾನು ಪ್ರಸ್ತುತ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ತಿಂಗಳಿಗೆ ಕೇವಲ ₹45 ಸಾವಿರದಿಂದ ₹50 ಸಾವಿರ ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಭವಿಷ್ಯದ ಬಗ್ಗೆ ಭಯವಾಗುತ್ತಿದೆ. ಇದರಿಂದ ಹೊರಬರಲು ಸಲಹೆ ನೀಡಿ,” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ತಿಂಗಳ ಖರ್ಚಿನ ವಿವರ

ಟೆಕ್ಕಿ ಹಂಚಿಕೊಂಡ ಮಾಹಿತಿಯ ಪ್ರಕಾರ:

  • ಮನೆ ಸಾಲದ EMI – ₹80,000
  • ಕಾರು ಸಾಲದ EMI – ₹30,000
  • ಮಕ್ಕಳನ್ನು ನೋಡಿಕೊಳ್ಳುವ ಆಯಾಗೆ – ₹40,000
  • ಪ್ರೀ-ಸ್ಕೂಲ್ ಹಾಗೂ ಡೇ-ಕೇರ್ ವೆಚ್ಚ – ₹50,000
  • ಮನೆ ಕೆಲಸ ಹಾಗೂ ಅಡುಗೆ ಸಹಾಯಕ್ಕೆ – ₹6,000
  • ದಿನಸಿ ವೆಚ್ಚ – ₹20,000
  • ಜಿಮ್ ಮತ್ತು ಪ್ರೋಟೀನ್ ಪೂರಕಗಳಿಗೆ – ₹8,000
  • ವಿದ್ಯುತ್ ಬಿಲ್, OTT ಹಾಗೂ ಇತರೆ ಮನೆ ಖರ್ಚು – ₹15,000
  • ಸಂಬಂಧಿಕರ ಮನೆ ಭೇಟಿ, ಪ್ರವಾಸ ಮತ್ತು ವಾರಾಂತ್ಯ ಚಟುವಟಿಕೆಗಳಿಗೆ – ಸುಮಾರು ₹40,000

ಇದರ ಪರಿಣಾಮ ತಿಂಗಳಿಗೆ ಉಳಿಕೆ ಬಹಳ ಕಡಿಮೆಯಾಗಿದ್ದು, ತನ್ನ ಒಟ್ಟು ನಿವ್ವಳ ಆಸ್ತಿ ಮೌಲ್ಯ ಸುಮಾರು ₹3 ಕೋಟಿ ಇದ್ದರೂ ಕಳೆದ ಕೆಲವು ವರ್ಷಗಳಿಂದ ಅದರಲ್ಲಿ ಹೆಚ್ಚಿನ ಬೆಳವಣಿಗೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.ಕೆಲವರು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ.

  • “ಪತ್ನಿ ಉದ್ಯೋಗ ಮಾಡದಿದ್ದರೆ ಡೇ-ಕೇರ್ ಅಗತ್ಯವೇ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ.
  • “ಆಯಾಗೆ ₹40 ಸಾವಿರ ನೀಡುವುದು ಹೆಚ್ಚು. ಈ ವೆಚ್ಚ ಕಡಿಮೆ ಮಾಡಬಹುದು,” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
  • “ಪ್ರೀ-ಸ್ಕೂಲ್ ಮತ್ತು ಡೇ-ಕೇರ್ ವೆಚ್ಚವೇ ನಿಮ್ಮ ಉಳಿತಾಯವನ್ನು ತಿನ್ನುತ್ತಿದೆ,” ಎಂದು ಇನ್ನೊಬ್ಬರು ಹೇಳಿದ್ದಾರೆ.

ಆದರೆ ಕೆಲವರು ಟೆಕ್ಕಿಗೆ ಧೈರ್ಯ ತುಂಬಿದ್ದಾರೆ.ನೀವು ಪರಿಸ್ಥಿತಿಯನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಖಂಡಿತ ಸುಧಾರಣೆ ಕಾಣುತ್ತೀರಿ,” ಎಂದು ಒಬ್ಬರು ಹೇಳಿದ್ದಾರೆ.ನಿಮ್ಮ ಬಳಿ ಈಗಾಗಲೇ ₹3 ಕೋಟಿ ಆಸ್ತಿ ಇದೆ. ಅದರ ಒಂದು ಭಾಗ ಲಿಕ್ವಿಡ್ ಹಣವಾಗಿದ್ದರೂ ಹಲವು ವರ್ಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಬದುಕಬಹುದು. ಉದ್ಯೋಗದ ಬಗ್ಗೆ ಅತಿಯಾಗಿ ಚಿಂತಿಸಬೇಡಿ,” ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೆಚ್ಚಿನ ಆದಾಯ ಇದ್ದರೂ ಉಳಿತಾಯ ಮಾಡುವುದು ಏಕೆ ಕಷ್ಟವಾಗುತ್ತಿದೆ ಎಂಬ ವಿಚಾರದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
BREAKING: ಟ್ರ್ಯಾಕ್ಟರ್ ಡಿಕ್ಕಿ: ಬೈಕ್ ನಲ್ಲಿ ತೆರಳುತ್ತಿದ್ದ ಮೂವರು ಸ್ಥಳದಲ್ಲೇ ದುರ್ಮರಣರಾಜ್ಯಾದ್ಯಂತ ಸ್ಮಾರ್ಟ್, ತಂತ್ರಜ್ಞಾನ ಆಧಾರಿತ ಪೊಲೀಸ್ ವ್ಯವಸ್ಥೆ: ಗೃಹ ಇಲಾಖೆಗೆ 100 ದಿನಗಳ ಕಾರ್ಯಯೋಜನೆಪ್ರಶ್ನೆ ಪತ್ರಿಕೆ ಸೋರಿಕೆ ಹಿನ್ನೆಲೆ ನಾಳೆ ನಡೆಯಬೇಕಿದ್ದ ಮಹಾರಾಷ್ಟ್ರ ಟಿಇಟಿ ಪರೀಕ್ಷೆ ರದ್ದು: ಮೂವರು ಅರೆಸ್ಟ್ಮಾಲಿವುಡ್‌ಗೆ ಯಾರು ಬೇಕಾದರೂ ಬನ್ನಿ, ಆದರೆ ಏನನ್ನೂ ಬದಲಿಸುವ ಪ್ರಯತ್ನ ಮಾಡಬೇಡಿ, ಇಲ್ಲಿಂದ ಕಲಿತುಕೊಂಡು ಹೋಗಿ ಅಷ್ಟೇ: ಪೃಥ್ವಿರಾಜ್ ಸುಕುಮಾರನ್ ಖಡಕ್ ಹೇಳಿಕೆ; ವಿಡಿಯೊBREAKING: ದುಷ್ಕರ್ಮಿಗಳಿಂದ ದಾಳಿಗೊಳಗಾಗಿದ್ದ ರೌಡಿಶೀಟರ್ ಸಾವುBREAKING NEWS: RSS ವಿರುದ್ಧ ಅವಹೇಳನಕಾರಿ ಹೇಳಿಕೆ: ಪ್ರಿಯಾಂಕ್ ಖರ್ಗೆ, ನಲಪಾಡ್ ಗೆ ಸಮನ್ಸ್ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ ಹೇಡಿತನದ ಕೃತ್ಯ: ಬಿ.ಕೆ.ಹರಿಪ್ರಸಾದ್BIG NEWS: ಅಯೋಧ್ಯೆ ರಾಮಮಂದಿರ ದೇಣಿಗೆ ಕಳ್ಳತನ ಕೇಸ್: ಚಂಪತ್ ರಾಯ್ ರಾಜೀನಾಮೆ ದೃಢಪಡಿಸಿದ ಟ್ರಸ್ಟ್, ಜು. 11ರಂದು ಪ್ರಮುಖರ ಸಭೆBREAKING NEWS: ರಾಷ್ಟ್ರ ರಾಜಧಾನಿ ದೆಹಲಿ, ಕಣಿವೆ ರಾಜ್ಯ ಜಮ್ಮು –ಕಾಶ್ಮೀರದಲ್ಲಿ ಪ್ರಬಲ ಭೂಕಂಪ: ಆಫ್ಘಾನಿಸ್ತಾನದಲ್ಲೂ ನಡುಗಿದ ಭೂಮಿFIFA ವಿಶ್ವಕಪ್: ಕೊಲಂಬಿಯಾ ಪಂದ್ಯಕ್ಕೂ ಮುನ್ನ ವಿಶೇಷ ಚಿನ್ನದ ಬಣ್ಣದ ಬೂಟುಗಳಲ್ಲಿ ತರಬೇತಿ ಪಡೆದ ಕ್ರಿಸ್ಟಿಯಾನೊ ರೊನಾಲ್ಡೊ