LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ತಿಂಗಳಿಗೆ ₹3.5 ಲಕ್ಷ ಸಂಬಳ ಇದ್ರೂ 50,000 ಉಳಿಸುವುದು ಕಷ್ಟ ; ಬೆಂಗಳೂರಿನ ಟೆಕ್ಕಿಯ ಪೋಸ್ಟ್ ವೈರಲ್.!

ಇಂದಿನ ಕಾಲದಲ್ಲಿ ದೊಡ್ಡ ಸಂಬಳ ಗಳಿಸುತ್ತಿದ್ದರೂ ಅನೇಕರು ಆರ್ಥಿಕ ಒತ್ತಡ ಮತ್ತು ಮಾನಸಿಕ ಆತಂಕಗಳನ್ನು ಎದುರಿಸುತ್ತಿದ್ದಾರೆ. ಸಂಬಳ ಎಷ್ಟೇ ಬಂದರೂ ಕೈಯಲ್ಲಿ ಹಣ ಉಳಿಯುತ್ತಿಲ್ಲ ಎಂಬ ಬೇಸರ ಮಧ್ಯಮ ವರ್ಗದಿಂದ ಹಿಡಿದು ಉನ್ನತ ವರ್ಗದವರಲ್ಲಿಯೂ ಕಂಡುಬರುತ್ತಿದೆ.

ಇದೀಗ ಬೆಂಗಳೂರಿನ ಟೆಕ್ಕಿಯೊಬ್ಬರು ಸಾಮಾಜಿಕ ಜಾಲತಾಣ ರೆಡಿಟ್ನಲ್ಲಿ ಹಂಚಿಕೊಂಡ ಪೋಸ್ಟ್‌ ಭಾರೀ ಚರ್ಚೆಗೆ ಕಾರಣವಾಗಿದೆ. ತೆರಿಗೆಗಳ ನಂತರ ತಿಂಗಳಿಗೆ ₹3.5 ಲಕ್ಷ ನಿವ್ವಳ ಆದಾಯ ಬಂದರೂ, ತಾನು ₹50 ಸಾವಿರವೂ ಸರಿಯಾಗಿ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

34 ವರ್ಷದ ಈ ಸಾಫ್ಟ್‌ವೇರ್ ಉದ್ಯೋಗಿ ಬೆಂಗಳೂರಿನಲ್ಲಿ ತನ್ನ ನಾಲ್ಕು ವರ್ಷದ ಅವಳಿ ಪುತ್ರಿಯರೊಂದಿಗೆ ವಾಸಿಸುತ್ತಿದ್ದಾರೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ವೆಚ್ಚಗಳಿಂದ ತನ್ನ ಆರ್ಥಿಕ ಭದ್ರತೆ ಬಗ್ಗೆ ತೀವ್ರ ಆತಂಕ ಉಂಟಾಗಿದೆ ಎಂದು ಹೇಳಿದ್ದಾರೆ.ನನ್ನ ವಾರ್ಷಿಕ ಪ್ಯಾಕೇಜ್ ₹96 ಲಕ್ಷ. ತೆರಿಗೆ ಕಡಿತವಾದ ಬಳಿಕ ತಿಂಗಳಿಗೆ ₹3.5 ಲಕ್ಷ ಸಂಬಳ ಕೈಗೆ ಬರುತ್ತದೆ. ಉಳಿದ ₹35 ಲಕ್ಷ ESOPs ರೂಪದಲ್ಲಿವೆ. ನಾನು ಪ್ರಸ್ತುತ ಅವುಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳುತ್ತಿಲ್ಲ. ಆದರೆ ತಿಂಗಳಿಗೆ ಕೇವಲ ₹45 ಸಾವಿರದಿಂದ ₹50 ಸಾವಿರ ಮಾತ್ರ ಉಳಿಸಿಕೊಳ್ಳಲು ಸಾಧ್ಯವಾಗುತ್ತಿದೆ. ಭವಿಷ್ಯದ ಬಗ್ಗೆ ಭಯವಾಗುತ್ತಿದೆ. ಇದರಿಂದ ಹೊರಬರಲು ಸಲಹೆ ನೀಡಿ,” ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ.

ತಿಂಗಳ ಖರ್ಚಿನ ವಿವರ

ಟೆಕ್ಕಿ ಹಂಚಿಕೊಂಡ ಮಾಹಿತಿಯ ಪ್ರಕಾರ:

  • ಮನೆ ಸಾಲದ EMI – ₹80,000
  • ಕಾರು ಸಾಲದ EMI – ₹30,000
  • ಮಕ್ಕಳನ್ನು ನೋಡಿಕೊಳ್ಳುವ ಆಯಾಗೆ – ₹40,000
  • ಪ್ರೀ-ಸ್ಕೂಲ್ ಹಾಗೂ ಡೇ-ಕೇರ್ ವೆಚ್ಚ – ₹50,000
  • ಮನೆ ಕೆಲಸ ಹಾಗೂ ಅಡುಗೆ ಸಹಾಯಕ್ಕೆ – ₹6,000
  • ದಿನಸಿ ವೆಚ್ಚ – ₹20,000
  • ಜಿಮ್ ಮತ್ತು ಪ್ರೋಟೀನ್ ಪೂರಕಗಳಿಗೆ – ₹8,000
  • ವಿದ್ಯುತ್ ಬಿಲ್, OTT ಹಾಗೂ ಇತರೆ ಮನೆ ಖರ್ಚು – ₹15,000
  • ಸಂಬಂಧಿಕರ ಮನೆ ಭೇಟಿ, ಪ್ರವಾಸ ಮತ್ತು ವಾರಾಂತ್ಯ ಚಟುವಟಿಕೆಗಳಿಗೆ – ಸುಮಾರು ₹40,000

ಇದರ ಪರಿಣಾಮ ತಿಂಗಳಿಗೆ ಉಳಿಕೆ ಬಹಳ ಕಡಿಮೆಯಾಗಿದ್ದು, ತನ್ನ ಒಟ್ಟು ನಿವ್ವಳ ಆಸ್ತಿ ಮೌಲ್ಯ ಸುಮಾರು ₹3 ಕೋಟಿ ಇದ್ದರೂ ಕಳೆದ ಕೆಲವು ವರ್ಷಗಳಿಂದ ಅದರಲ್ಲಿ ಹೆಚ್ಚಿನ ಬೆಳವಣಿಗೆ ಆಗಿಲ್ಲ ಎಂದು ಅವರು ಹೇಳಿದ್ದಾರೆ.

ನೆಟ್ಟಿಗರ ಪ್ರತಿಕ್ರಿಯೆ

ಈ ಪೋಸ್ಟ್‌ಗೆ ಸಾಮಾಜಿಕ ಜಾಲತಾಣದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.ಕೆಲವರು ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡುವಂತೆ ಸಲಹೆ ನೀಡಿದ್ದಾರೆ.

  • “ಪತ್ನಿ ಉದ್ಯೋಗ ಮಾಡದಿದ್ದರೆ ಡೇ-ಕೇರ್ ಅಗತ್ಯವೇ?” ಎಂದು ಒಬ್ಬರು ಪ್ರಶ್ನಿಸಿದ್ದಾರೆ.
  • “ಆಯಾಗೆ ₹40 ಸಾವಿರ ನೀಡುವುದು ಹೆಚ್ಚು. ಈ ವೆಚ್ಚ ಕಡಿಮೆ ಮಾಡಬಹುದು,” ಎಂದು ಮತ್ತೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
  • “ಪ್ರೀ-ಸ್ಕೂಲ್ ಮತ್ತು ಡೇ-ಕೇರ್ ವೆಚ್ಚವೇ ನಿಮ್ಮ ಉಳಿತಾಯವನ್ನು ತಿನ್ನುತ್ತಿದೆ,” ಎಂದು ಇನ್ನೊಬ್ಬರು ಹೇಳಿದ್ದಾರೆ.

ಆದರೆ ಕೆಲವರು ಟೆಕ್ಕಿಗೆ ಧೈರ್ಯ ತುಂಬಿದ್ದಾರೆ.ನೀವು ಪರಿಸ್ಥಿತಿಯನ್ನು ಚೆನ್ನಾಗಿಯೇ ನಿರ್ವಹಿಸುತ್ತಿದ್ದೀರಿ. ಮುಂದಿನ ದಿನಗಳಲ್ಲಿ ಖಂಡಿತ ಸುಧಾರಣೆ ಕಾಣುತ್ತೀರಿ,” ಎಂದು ಒಬ್ಬರು ಹೇಳಿದ್ದಾರೆ.ನಿಮ್ಮ ಬಳಿ ಈಗಾಗಲೇ ₹3 ಕೋಟಿ ಆಸ್ತಿ ಇದೆ. ಅದರ ಒಂದು ಭಾಗ ಲಿಕ್ವಿಡ್ ಹಣವಾಗಿದ್ದರೂ ಹಲವು ವರ್ಷಗಳ ಕಾಲ ಯಾವುದೇ ತೊಂದರೆಯಿಲ್ಲದೆ ಬದುಕಬಹುದು. ಉದ್ಯೋಗದ ಬಗ್ಗೆ ಅತಿಯಾಗಿ ಚಿಂತಿಸಬೇಡಿ,” ಎಂದು ಮತ್ತೊಬ್ಬರು ಸಲಹೆ ನೀಡಿದ್ದಾರೆ.ಈ ಪೋಸ್ಟ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಹೆಚ್ಚಿನ ಆದಾಯ ಇದ್ದರೂ ಉಳಿತಾಯ ಮಾಡುವುದು ಏಕೆ ಕಷ್ಟವಾಗುತ್ತಿದೆ ಎಂಬ ವಿಚಾರದ ಬಗ್ಗೆ ದೊಡ್ಡ ಚರ್ಚೆಗೆ ಕಾರಣವಾಗಿದೆ.

Author
All About Belagavi
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

FOR SALE

Premium Domain

allaboutbelagavi.com

Domain Age: 11 Years 6 Month Old
ಈ ಪ್ರೀಮಿಯಂ ನ್ಯೂಸ್ ಡೊಮೇನ್ ಮತ್ತು ಸಂಪೂರ್ಣವಾಗಿ ಕಾನ್ಫಿಗರ್ ಮಾಡಲಾದ ಪೋರ್ಟಲ್ ತಕ್ಷಣದ ಸ್ವಾಧೀನಕ್ಕೆ ಲಭ್ಯವಿದೆ. ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಸಾಮರ್ಥ್ಯ.
This premium news domain and fully configured portal is available for immediate acquisition. High potential for localized news.
Contact / Contact Us
LATEST
ಕಲ್ಯಾಣ ಕರ್ನಾಟಕ ಜನತೆಗೆ ಗುಡ್ ನ್ಯೂಸ್: KKRTC ಗೆ 400 ಹೊಸ ಬಸ್ ಮಂಜೂರುಮನೆಗಳ್ಳತನ ಪ್ರಕರಣದಲ್ಲಿ ಇಬ್ಬರು ಅಪ್ರಾಪ್ತರು ವಶಕ್ಕೆ: ಲಕ್ಷಾಂತರ ರೂ. ಮೌಲ್ಯದ ಆಭರಣ ವಶಬಾಂಗ್ಲಾದೇಶದ ನೂತನ ಅಧ್ಯಕ್ಷರಾಗಿ BNP ಅಭ್ಯರ್ಥಿ ಮಿರ್ಜಾ ಫಖ್ರುಲ್ ಇಸ್ಲಾಂ ಅಲಂಗೀರ್ ಆಯ್ಕೆBREAKING: ಲಡಾಖ್ ನಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಪೀಠ ಸ್ಥಾಪನೆಗೆ ಕೇಂದ್ರ ನಿರ್ಧಾರ: ಅಮಿತ್ ಶಾ ಘೋಷಣೆಅನುಮತಿ ಇಲ್ಲದೆ ಸಚಿವ ಕೃಷ್ಣ ಬೈರೇಗೌಡರ ಪೋಸ್ಟರ್ ಅಂಟಿಸಿದ್ದ ವ್ಯಕ್ತಿ ವಿರುದ್ಧ ಕೇಸ್ ದಾಖಲುಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿKPME ಉಲ್ಲಂಘನೆ: ಖಾಸಗಿ ವೈದ್ಯಕೀಯ ಸಂಸ್ಥೆಗಳಿಗೆ ದಂಡ, ಪರವಾನಗಿ ರದ್ದುಮೋದಿ ದೇವರಿಗೆ ಪೂಜೆ: ಭಕ್ತರಿಂದ ‘ಜೈ ಜೈ ಮೋದಿ, ಹರ್ ಹರ್ ಮೋದಿ’ ಘೋಷಣೆ; ದೆಹಲಿ ಪ್ರೆಸ್ ಕ್ಲಬ್‌ನಲ್ಲಿ ‘ಮೋದಿ ಚಾಲೀಸಾ’ ಕಾರ್ಯಕ್ರಮ!ತಪ್ಪಾಯ್ತು ಕ್ಷಮಿಸಿಬಿಡಿ: ರಸ್ತೆ ಮುಚ್ಚಿದ್ದಕ್ಕೆ ಭಾರತೀಯ ಸೇನೆಗೆ ‘ನಾನು GenZ’ ಎಚ್ಚರಿಕೆ ನೀಡಿದ್ದ ಯುವತಿಯಿಂದ ಕ್ಷಮೆಯಾಚನೆಲೋಕಸಭಾ ಕ್ಷೇತ್ರ ಹೆಚ್ಚಳ ಮಾಡಬಾರದು; 1971ರ ಜನಸಂಖ್ಯೆ ಆಧಾರವನ್ನು ಗೌರವಿಸಬೇಕು ಸಿಎಂ ಡಿ.ಕೆ.ಶಿವಕುಮಾರ್ ಮನವಿ